ಗುವಾಹಾಟಿ: ಅದಾನಿ ಕುರಿತ ಟ್ವೀಟ್ಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಪ್ರವಾಸದಿಂದ ಹಿಂತಿರುಗಿದ ನಂತರ, ( ಏಪ್ರಿಲ್ 14 ) ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು” ಎಂದು ಶರ್ಮಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅವರು ಸತ್ಯವನ್ನು ಮರೆಮಾಚುತ್ತಾರೆ, ಅದಕ್ಕಾಗಿಯೇ ಅವರು ಪ್ರತಿದಿನ ದಾರಿತಪ್ಪಿಸುತ್ತಾರೆ! ಅದಾನಿ ಕಂಪನಿಗಳಲ್ಲಿ ₹ 20,000 ಕೋಟಿ ಬೇನಾಮಿ ಹಣ ಯಾರದ್ದು?” ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.
ಶರ್ಮಾ ಅವರು ಗಾಂಧಿಯವರ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, ಬೋಫೋರ್ಸ್ ಮತ್ತು ನ್ಯಾಷನಲ್ ಹೆರಾಲ್ಡ್ ಹಗರಣಗಳಿಂದ ಅಪರಾಧದ ಆದಾಯವನ್ನು ಮರೆಮಾಚಿರುವ ಬಗ್ಗೆ ಅಥವಾ ಒಟ್ಟಾವಿಯೊ ಕ್ವಟ್ರೋಚಿ ಪದೇ ಪದೇ ಭಾರತೀಯ ನ್ಯಾಯದಿಂದ ಹೇಗೆ ತಪ್ಪಿಸಿಕೊಂಡರು ಎಂಬುದರ ಕುರಿತು ಅವರು ಅವರನ್ನು ಎಂದಿಗೂ ಪ್ರಶ್ನಿಸಲಿಲ್ಲ ಎಂದು ಹೇಳಿದರು.