News Karnataka Kannada
Saturday, May 04 2024
ಸಂಪಾದಕೀಯ

ದಶಮಾನೋತ್ಸವ ಸಂಭ್ರಮದಲ್ಲಿ ನ್ಯೂಸ್ ಕರ್ನಾಟಕ: ಓದುಗರಿಗೆ ಧನ್ಯವಾದಗಳು

Untitled 1
Photo Credit :

ಇಂದು ನ್ಯೂಸ್ ಕರ್ನಾಟಕ ತನ್ನ ದಶ ವಾರ್ಷಿಕೋತ್ಸವವನ್ನು ಆಚರಿಸಿಕೋಳ್ಳುತ್ತಿದ್ದೆ. ಈ ಹತ್ತು ವರ್ಷಗಳಲ್ಲಿ ನಮ್ಮ ಸುದ್ದಿ ವೇದಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದಕ್ಕಾಗಿ ಕರ್ನಾಟಕ ಮತ್ತು ಜಗತ್ತಿನಾದ್ಯಂತ ಇರುವ ಕನ್ನಡಿಗರಿಗೆ ಧನ್ಯವಾದ ಹೇಳಲು ಸೂಕ್ತ ಅವಕಾಶ ಒದಗಿಬಂದಿದೆ.

ನ್ಯೂಸ್ ಕರ್ನಾಟಕ.ಕಾಂಮ್ ನಲ್ಲಿ ಸತ್ಯಾಂಸವುಳ್ಳ ಮಾಹಿತಿ ಹೊಂದಿದೆ. ಏಕೆಂದರೆ ನಮ್ಮ ಯುವ ಮತ್ತು ಕ್ರಿಯಾತ್ಮಕ ಸಂಪಾದಕೀಯ ತಂಡವು ಎಲ್ಲಾ ಸಂದರ್ಭದಲ್ಲೂ ದೃಡವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಬಲವಾದ ವಿಶ್ವಾಸ ಹೊಂದಿದೆ. ಎಲ್ಲಾ ಸಮಯದಲ್ಲೂ ಗರಿಷ್ಟತೆಗೆ ಅಚಲವಾಗಿ ಬದ್ದವಾಗಿದೆ. ಕಾನೂನುಬದ್ಧ ಮತ್ತು ಸತ್ಯಾಂಶ ಇರುವ ಮಾಹಿತಿ ಪ್ರತಿಯೊಬ್ಬನ ನಾಗರಿಕನ ಹಕ್ಕು.ಈ ನಿಟ್ಟಿನಲ್ಲಿ ಓದುಗಾರರ ಹಕ್ಕುಗಳಿಗೆ ಬಧ್ದತೆಯಿಂದ ಕೆಲಸ ಮಾಡುತ್ತಿದ್ದೇವೆ.

ನ್ಯೂಸ್ ಕರ್ನಾಟಕ.ಕಾಂಮ್ ಹತ್ತು ವರ್ಷಗಳ ಹಿಂದೆ ಇದೇ ದಿನ ಕನ್ನಡ ನ್ಯೂಸ್ ಪೋರ್ಟಲ್ ಆಗಿ ಪ್ರಾರಂಭವಾಯಿತು.ನಂತರದ ವರ್ಷದಲ್ಲಿ ಕನ್ನಡಿಗರಿಗಾಗಿ ಇಂಗ್ಲೀಷ್ ನ್ಯೂಸ್ ಪೋರ್ಟಲ್ ಆಗಿ ಪುನರ್ ರಚನೆಯಾಯಿತು. ನಮ್ಮ ಸೋದರ ಪ್ರಕಟನೆಗಳಾದ ನ್ಯೂಸ್ ಕನ್ನಡ ಮತ್ತು ಕರ್ನಾಟಕ ಟುಡೇ ಕೂಡಾ ಶ್ರೀಮಂತ ಸುದ್ದಿ ಮತ್ತು ವೈಶಿಷ್ಟ್ಯದ ವಿಷಯಗಳನ್ನು ಹೊಂದಿದೆ ಎಂದರೆ ಆಶ್ಚರ್ಯಪಡುವತಿಂಲ್ಲ. ಈ ಪ್ರತಿಯೊಂದು ಮಾಧ್ಯಮ ಬ್ರಾಂಡ್‍ಗಳು ತಮ್ಮದೇ ಆದ ಓದುಗರ ನೆಲೆಯನ್ನು ಹೋದಿದೆ. ಅದರಲ್ಲೂ ವಿಶೇಷವಾಗಿ ನಮ್ಮ ಯೂಟ್ಯೂಬ್ ಚಾನೆಲ್.

ನಾವು ನೀಡುವ ಹಲವಾರು ಬ್ರಾಂಡಿಂಗ್ ಅವಕಾಶಗಳ ಜೊತೆಗೆ ಪರಿಶೀಲಿಸಿದ ಸುದ್ದಿಗಳು ಮತ್ತು ವೈಶಿಷ್ಟತೆಗಳು ಆಸಕ್ತಿದಾಯಕ ಮತ್ತು ಇನ್ಫೋಟೈನಿಂಗ್ ಚರ್ಚೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ತಲುಪಿಸುವ ನಮ್ಮ ಬದ್ಧತೆಯು ಕರ್ನಾಟಕದ ಡಿಜಿಟಲ್ ಸುದ್ದಿ ಉದ್ಯಮವನ್ನು ಪರಿವರ್ತಿಸುತ್ತದೆ. ಇಂದು ಸೂಪರ್ಸಾನಿಕ್ ಪ್ರವೇಶದೊಂದಿಗೆ ಸಂಯೋಜಿಸಲ್ಪಟ್ಟ ಸುಲಭವಾದ ನ್ಯಾವಿಗೇಶನ್ ಪರಿಕರಗಳ ಮೂಲಕ ನಿಮಗೆ ಉತ್ತಮ ಹಾಗೂ ವೇಗ ಮತ್ತು ತಿಳುವಳಿಕೆಯ ಓದುವಿಕೆ ಮತ್ತು ಅನುಭವವನ್ನು ಸಕ್ರಿಯಗೊಳಿಸುವ ದೃಶ್ಯ ಮಾಧ್ಯಮವನ್ನು ನಾವು ಮರು ವ್ಯಾಖ್ಯಾನಸಿದ್ದೇವೆ. ಹೀಗಾಗಿ ಹೆಚ್ಚಿನ ಓದುಗಾರರನ್ನು ಆಕರ್ಷಿಸಲು ಸಾಧ್ಯವಾಗುತ್ತಿದೆ ಇದರ ಪರಿಣಾಮವಾಗಿ ನಮ್ಮ ಹೆಜ್ಜೆಗುರುತುಗಳು ಬೆಳೆಯುತ್ತಿದೆ ಮತ್ತು ಪ್ರಪಂಚದಾದ್ಯಂತ ಎಲ್ಲಾರ ಗಮನ ಸೆಳೆಯುತ್ತಿದೆ.

ನಮ್ಮ ಮಾತೃ ಸಂಸ್ಥೆ ಕೋವಿಡ್-19 ರ ಸಮಯದಲ್ಲಿ ಉತ್ತಮವಾದ ಕಂಟೆಂಟ್ ವಿತರಣೆಗಾಗಿ ಪಿಆರ್‍ಸಿಐ ಇಂದ ಗರುತಿಸಲ್ಪಟ್ಟಿತ್ತು ಮತ್ತು ಚಾಣಕ್ಯ ಪ್ರಶಸ್ತಿ 2021 ಮೀಡಿಯಾ ಹೌಸ್ ಆಫ್ ಇಯರ್ ಪ್ರಶಸ್ತಿಯನ್ನು ಪಡೆಯಿತ್ತು. ಸ್ಪಿಯರ್ ಹೆಡ್ ವಿಶೇಷವಾಗಿ ರಾಜ್ಯದ ಯುವಕರಿಗೆ ಹೆಚ್ಚಿನ ಉದ್ಯೋಗ ಅವಕಾಶವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ನಮ್ಮ ವಿಶೇಷ ಹೈಪರ್‍ಲೋಕಲ್ ಸಿಟಿ ಪುಟಗಳಲ್ಲಿ ಸ್ಥಳೀಯ ವಿಷಯಗಳನ್ನು ಸುಗಮಗೊಳಿಸುವ ಮೂಲಕ ನಮ್ಮ ಹೊಸ ಶಿಕ್ಷಣ ವಿಭಾಗ ಸ್ಪಿಯರ್ ಹೆಡ್ ಅಕಾಡೆಮಿ ಮತ್ತು ಕರ್ನಾಟಕದಾದ್ಯಂತ ಮಾಧ್ಯಮ ಉದ್ಯಮಿಗಳ ಮೂಲಕ ಸ್ಥಳೀಯ ಪತ್ರಕರ್ತರನ್ನು ಪೋಷಿಸಲು ನಾವು ಬದ್ದರಾಗಿದ್ದೇವೆ.

ಈ ಹಂತದವರೆಗೆ ನಮ್ಮ ಯಶಸ್ಸಿನ ಪಯಣ ಬೆಂಬಲದಿಂದ ಮಾತ್ರ ಸಾಧ್ಯವಾಗಿದೆ. ನಮ್ಮ ಓದುಗರು, ಕೊಡುಗೆದಾರರು, ವರದಿಗಾರರು,ಜಾಹೀರಾತುದಾರರು, ಏಜೆನ್ಸಿಗಳು,ಹಿತೈಷಿಗಳು, ನಿರ್ವಹಣೆ ಉದೋಗಿಗಳು, ಷೇರುದಾರರು, ಸರಕಾರ, ಅಧಿಕಾರಿಗಳು, ಮತ್ತು ಮಾರಾಟಗಾರರಿಗೆ ನಮ್ಮ ಕೃತಜÐತೆಯನ್ನು ವ್ಯಕ್ತಪಡಿಸಲು ನಾವು ಸ್ಮರಣಾರ್ಥ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದೇವೆ.. ನಿಮ್ಮಲ್ಲಿ ಪ್ರತಿಯೊಬ್ಬರು ಸಂಪಾದಕೀಯ ಸ್ವಾಯತ್ತತೆಯೊಂದಿಗೆ ನಮ್ಮನ್ನು ಬೆಂಬಲಿಸಿದ್ದೀರಿ ಇದು ನಮ್ಮ ದಶಕದ ಯಶಸ್ಸಿಗೆ ಪ್ರಮುಖ ಅಂಶವಾಗಿದೆ,. ನ್ಯೂಸ್ ಕರ್ನಾಟಕ.ಕಾಂಮ್ ನಲ್ಲಿ ಸತ್ಯ ಯಾವಾಗಲೂ ಉಳಿಯುತ್ತದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತಾ, ಇದೇ ಬೆಂಬಲ ಮುದಿನ ದಿನಗಳ್ಲಿ ಪತ್ತಿಕೋದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಛಾಪು ಮೂಡಿಸಲು ನೆರವಾಗಲಿದೆ ಎಂದು ದೃಢವಾಗಿ ನಂಬಿದ್ದೇವೆ.

ನಾವು ಈ ಮೂಲಕ ನ್ಯೂಸ್ ಕರ್ನಾಟಕ.ಕಾಂಮ್ ನ್ನು ‘ಕರ್ನಾಟಕ ಮತ್ತು ಕನ್ನಡಿಗರನ್ನು ಜಗತ್ತಿನಾದ್ಯಂತ ಸಂಪರ್ಕಿಸುವುದು’ ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತೇವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
202
Srinivasa Pejathaya

Read More Articles
Related Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು