ಸೀತಾಫಲ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

ಸಕ್ಕರೆ ಸೇಬು ಎಂದು ಕರೆಯಲ್ಪಡುವ ಸೀತಾಫಲವು ಭಾರತದಲ್ಲಿ ಸಿಗುವ ರುಚಿಕರವಾದ ಹಣ್ಣುಗಳಲ್ಲಿ ಒಂದು. ಅನೋನಾಸಿ ಕುಟುಂಬಕ್ಕೆ ಸೇರಿದ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಕಸ್ಟರ್ಡ್ ಆಪಲ್ ಎಂದು ಕರೆಯುತ್ತಾರೆ. ಹೃದಯಕಾರವಾಗಿರೋ ಈ ಹಣ್ಣು ಹಳದಿ ಅಥವಾ ಹಸಿರು ಬಣ್ಣವನ್ನು ಹೊಂದಿದ್ದು ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಮ್ಯಾಂಗನೀಸ್ ಕಬ್ಬಿಣ ಮತ್ತು ಪೊಟ್ಯಾಸಿಯಂ ತುಂಬಿಕೊಂಡಿದೆ.

ಈ ಹಣ್ಣು ತಿನ್ನಲು ರುಚಿಕರವಷ್ಟೇ ಅಲ್ಲದೆ ಇದರ ಎಲೆಯಲ್ಲಿ ಬಹಳಷ್ಟು ಆರೋಗ್ಯಕರ ಔಷಧೀಯ ಗುಣಗಳು ಸಹ ಇದೆ.

ಸೀತಾಫಲ ಬೆಳಿಗ್ಗೆ ಹವಾಮಾನ ಪರಿಸ್ಥಿತಿ: ಸೀತಾಫಲ ಶುಷ್ಕ ಮತ್ತು ಬಿಸಿ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಇದಕ್ಕೆ ಹಗುರವಾದ ಮಣ್ಣು ಬೇಕು ಮತ್ತು ಸಾಮಾನ್ಯವಾಗಿ ಬೆಟ್ಟಗಳ ಇಳಿಜಾರಿನಲ್ಲಿ ಬಳಸಲಾಗುತ್ತದೆ. ಸಸಿ ಬೀಜಗಳಿಂದ ಬೆಳೆದು ಸುಮಾರು ಮೂರರಿಂದ ನಾಲ್ಕು ವರ್ಷಗಳಲ್ಲಿ ಫಲವನ್ನು ನೀಡುತ್ತದೆ.

ಈ ಸಸ್ಯವು ಏಪ್ರಿಲ್ ನಿಂದ ಮೇ ವರೆಗೆ ಮತ್ತು ಆಗಸ್ಟ್ ನಿಂದ ನವೆಂಬರ್ ನಡುವೆ ಫಲ ನೀಡುತ್ತದೆ. ಸೀತಾಫಲವನ್ನು ವಾಣಿಜ್ಯ ಉತ್ಪಾದನೆಗಾಗಿ ಸೀಮಿತಗೊಳಿಸಲು ಹವಾಮಾನ ಅಂಶಗಳು ತಾಪಮಾನ ಮತ್ತು ತೇವಾಂಶಗಳು ಪ್ರಮುಖವಾಗಿರುತ್ತದೆ.

ಸೀತಾಫಲ ಬೆಳಿಗ್ಗೆ ಮಣ್ಣಿನ ಫಲವತ್ತತೆ: ಸೀತಾಫಲ ಮರಳು ಮಿಶ್ರಿತ ಲೋಮ್ ಮಣ್ಣಿನಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಮರೆತ ಬೇರುಗಳು ಹೆಚ್ಚಾಗಿ ಆಳವಿಲ್ಲದಿದ್ದರೂ ಬೇರು ಕೊಳೆತವನ್ನು ತಪ್ಪಿಸಲು ಮತ್ತು ಮರದ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಜೇಡಿ ಮಣ್ಣು ಅಥವಾ ಬಂಡೆಕಲ್ಲುಗಳಿಲ್ಲದ ಬರಿದು ಹೋದ ಮಣ್ಣು ಬೇಕಾಗುತ್ತದೆ. ತೀರಾ ಕಳಪೆ ಮಟ್ಟದ ಮಣ್ಣಿನಲ್ಲಿ ಸೀತಾಫಲವು ರೋಗಕ್ಕೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತದೆ.

ಸೀತಾಫಲ ಬೆಳೆಯಲು ನೀರಿನ ಅವಶ್ಯಕತೆ: ಸೀತಾಫಲ ಬೆಳೆಯಲು ಬೆಳವಣಿಗೆಯ ಉದ್ದಕ್ಕೂ ಏಕರೂಪದ ಮಣ್ಣಿನ ತೇವಾಂಶವು ಬೇಕಾಗುತ್ತದೆ. ಉತ್ತಮ ಗುಣಮಟ್ಟದ ಇಳುವರಿಯನ್ನು ಪಡೆಯಲು ನೀರಾವರಿಯ ಅಗತ್ಯ ಹೆಚ್ಚಾಗಿರುತ್ತದೆ. ಉತ್ತಮ ಹಣ್ಣಿನ ಗುಣಮಟ್ಟವನ್ನು ಸಾಧಿಸಲು ಹೂ ಬಿಡುವ ಮತ್ತು ಹಣ್ಣಿನ ಬೆಳವಣಿಗೆ ಸಮಯದಲ್ಲಿ ಸಸ್ಯಗಳಿಗೆ ನೀರುಣಿಸುವುದು ಅತ್ಯಗತ್ಯ. ಹೆಚ್ಚಿನ ನೀರನ್ನು ದಯಮಾಡುವ ಬದಲು ಹನಿ ನೀರಾವರಿ ಪದ್ಧತಿಯನ್ನು ಸೀತಾಫಲ ಬೆಳಿಗ್ಗೆ ಬಳಸಬಹುದು. ಸೀತಾಫಲವನ್ನ ನಾಟಿ ಮಾಡಿದ ಮೂರು ವರ್ಷಗಳ ನಂತರ ಇದು ಫಸಲು ನೀಡಲು ಆರಂಭಿಸುತ್ತದೆ.

ಸೀತಾಫಲ ಕೃಷಿಯನ್ನು ಕಡಿಮೆ ಹೂಡಿಕೆ ಮಾಡಿ ಉತ್ತಮ ಲಾಭದಾಯಕ ಬೆಳೆಯಾಗಿ ಬೆಳೆಸಬಹುದಾಗಿದೆ.

ಸೀತಾಫಲದಿಂದ ಆರೋಗ್ಯ ಪ್ರಯೋಜನಗಳು: ಅನೇಕ ರೋಗಗಳಿಂದ ರಕ್ಷಣೆ ಸೀತಾಫಲ ಉತ್ತಮವಾದ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದು ಹೃದಯ ಮತ್ತು ಕಣ್ಣುಗಳನ್ನು ಆರೋಗ್ಯದಿಂದಿರಿಸುತ್ತದೆ ಹಾಗೂ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಸಹ ತಡೆಯುತ್ತದೆ.

ಅಧಿಕಾರಕ್ಕೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ

ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ

ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ

ಅಸ್ತಮಾ ರೋಗ ಬರದಂತೆ ತಡೆಯುತ್ತದೆ

ಎದೆಯ ಗಾದೆಯಿಂದ ಹೃದಯವನ್ನು ರಕ್ಷಿಸುತ್ತದೆ

Ashika S

Recent Posts

ಅನೈತಿಕ ಸಂಬಂಧ ಶಂಕೆ: ಬೀದರ್​​ನಲ್ಲಿ ಯುವಕರಿಂದ ನೈತಿಕ ಪೊಲೀಸ್​ ಗಿರಿ

ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್​​…

6 hours ago

ಸಂಗೊಳ್ಳಿರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಆರೋಪಿ ಸೆರೆ

ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…

6 hours ago

ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…

6 hours ago

ಬೀದರ್‌: ಜಿಲ್ಲೆಯಾದ್ಯಂತ ತಂಪೆರೆದ ಮಳೆ, ಸಿಡಿಲಿಗೆ ವ್ಯಕ್ತಿ ಸಾವು

ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

7 hours ago

ಆಮ್ ಆದ್ಮಿ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ನಾನು ಮತ್ತೆ ಜೈಲಿಗೆ ಹೋಗಬೇಕಾಗಿಲ್ಲ

ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…

8 hours ago

ಗೌಡರ ಕುಟುಂಬಕ್ಕೆ ಮೋಸ ಮಾಡುವುದಿಲ್ಲ: ಕೆ.ಮಂಜು

ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…

8 hours ago