ಭಾರತೀಯ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಸಾಂಪ್ರದಾಯಿಕ ಮಹತ್ವವೂ ಇದೆ. ಅದೇ ರೀತಿ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣವೂ ಇರುತ್ತದೆ. ಅದಕ್ಕೆ ಸರಿಹೊಂದುವ ಉದಾಹರಣೆ ಎಂದರೆ ನಮ್ಮ ದೇಶದ ಸುಮಂಗಲಿಯರು ಧರಿಸುವ ಕರಿಮಣಿ ಸರ.
ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಕೊಡುತ್ತಾರೋ ಅಷ್ಟೇ ಮಹತ್ವ ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪ್ರಾಮುಖ್ಯತೆ ನಮ್ಮ ದೇಶದಲ್ಲಿ ಇದೆ.
ಮದುವೆಯ ಸಂಕೇತವಾಗಿ ಸ್ರೀ ಕರಿಮಣಿ ಧರಿಸುತ್ತಾಳೆ. ಮುತ್ತೈದೆಯರು ಕರಿಮಣಿ ಜೊತೆಗೆ ತಾಳಿ, ಕುಂಕುಮ ಗಾಜಿನ ಬಳೆ ಕಾಲುಂಗುರ ಮುಡಿಗೆ ಅರಳಿದ ಹೂವು ಧರಿಸಿದ್ದರೆ ಅವಳು ಸುಮಂಗಳಿ ಎನಿಸಿಕೊಳ್ಳುತ್ತಾಳೆ. ಆದರೆ ಇಂದು ಮಹಿಳೆಯರ ಮನಸ್ಥಿತಿ ಬದಲಾಗಿದೆ. ಆಧುನಿಕತೆಯ ಮೋಹಕ್ಕೆ ಸಿಲುಕಿ ಗೃಹಣಿಯರು ಸೌಭಾಗ್ಯ ಸೂಚಕವಾದ ಇಂತಹ ಆಭರಣಗಳನ್ನು ಧರಿಸಲು ಆಸಕ್ತ ತೋರುತ್ತಿಲ್ಲ. ಇನ್ನು ಕೆಲವರು ಕರಿಮಣಿ ಸರವನ್ನು ಮನೆಯಿಂದ ಹೊರಗೆ ಹೋಗುವಾದ ಮಾತ್ರ ಧರಿಸತ್ತಾರೆ.
ಸಂಪ್ರದಾಯವನ್ನು ಎತ್ತಿ ಹಿಡಿಯುವ ಮಂಗಳಕರ ಆಭರಣಗಳನ್ನು ಧರಿಸುದರಿಂದ ನಾರಿ ಪೂಜನೀಯಳಾಗುತ್ತಾಳೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದುಷ್ಟ ಶಕ್ತಿಗಳ ದೃಷ್ಟಿ ಮಾಂಗಲ್ಯದ ಮೇಲೆ ಬೀಳದಿರಲಿ ಎಂದು ಗೃಹಿಣಿಯರು ಕರಿಮಣಿ ಧರಿಸುತ್ತಾರೆ. ಅಷ್ಟೇ ಅಲ್ಲದೇ ಕರಿಮಣಿಯು ಸಂತಾನ ಸಾಫಲ್ಯ ಧನ, ಸುಖದ ಚಿಹ್ನೆಯಾಗಿದೆ.
ಇಂದು ಮಹಿಳೆಯರು ದಿನ ನಿತ್ಯದ ಬಳಕೆಗೆ ಆಧುನಿಕ ಉಡುಪುಗಳಿಗೆ ಪ್ರಾಶಸ್ತ್ಯ ನೀಡುತ್ತಾರೆ. ದಪ್ಪದ ಮಾಂಗಲ್ಯ ಸರಗಳು ಎಲ್ಲಾ ಬಗೆಯ ಉಡುಪುಗಳಿಗೂ ಹೊಂದಿಗೆಯಾಗುವುದಿಲ್ಲವಾದ್ದರಿಂದ ಆಧುನಿಕ ಫ್ಯಾಷನ್ಗೆ ಹೊಂದಿಕೆಯಾಗುವಂತೆ ಕರಿಮಣಿ ಸರಗಳಲ್ಲೂ ವಿನ್ಯಾಸಗಳನ್ನು ಬಯಸುತ್ತಾರೆ. ಆದ್ದರಿಂದ ತಾಳಿಯ ಸ್ಥಾನವನ್ನು ವಜ್ರ ಮತ್ತು ಹರಳಿನ ಪೆಂಡೆಂಟ್ಗಳು ಆವರಿಸಿಕೊಂಡಿವೆ. ಏಕೆಂದರೆ ಇಂತಹ ಕರಿಮಣಿ ಸರಗಳು ಸೀರೆ, ಸಲ್ವಾರ್, ಜೀನ್ಸ್ ನಂತಹ ಎಲ್ಲಾ ಉಡುಪುಗಳಿಗೆ ಮಾಚ್ ಆಗುತ್ತದೆ.
ಕರಿಮಣಿಸರ ಧರಿಸುದರಿಂದ ಉಪಯೋಗಗಳು ಇವೆ. ಅದೇನೆಂದರೆ, ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಅದು ಹೀರಿಕೊಳ್ಳುತ್ತದೆ. ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಕಾಪಾಡುತ್ತದೆ. ಈ ಮೂಲಕ ಎದೆಹಾಲು ಶಿಶುವಿಗೆ ಸಮ ಉಷ್ಣತೆಯಲ್ಲಿರಲು ಸಹಾಯ ಮಾಡುತ್ತದೆ.