News Karnataka Kannada
Tuesday, April 30 2024
ಅಂಕಣ

ಮಧ್ಯ ವಯಸ್ಕರನ್ನು ಕಾಡುವ ಮೊಡವೆ ಸಮಸ್ಯೆ ನಿವಾರಿಸಲು ಇಲ್ಲಿದೆ ಪರಿಹಾರ

Pimples
Photo Credit :

ಹದಿಹರೆಯದ ಹುಡುಗ ಹುಡುಗಿಯ ದೊಡ್ಡ ಸಮಸ್ಯೆ ಮುಖದ ಮೇಲೆ ಮೊಡವೆ ಬೀಳುವುದು. ಕಾಲೇಜಿಗೆ ಹೋಗೋ ತರುಣ ತರುಣಿಯರು ಮುಖದ ಬಗ್ಗೆ ಅತೀ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅಂತವರಿಗೆ ಮುಖದಲ್ಲಿ ಸಣ್ಣ ಕಳೆ ಯಾದರೂ ಅದು ಅವರರಿಗೆ ದೊಡ್ಡ ಸಮಸ್ಯೆಯಂತೆ ಭಾಸವಾಗುತ್ತದೆ. ಮೊಡವೆ ಉಂಟಾಗಲು ಅನೇಕ ಕಾರಣಗಳಿವೆ. ಹಾರ್ಮೋನುಗಳ ಬದಲಾವಣೆ, ವೈದ್ಯಕೀಯ ಕಾರಣಗಳು ಮತ್ತು ಜೀವನಶೈಲಿಯ ಅಂಶಗಳು ಸಾಮಾನ್ಯವಾಗಿ ಮೊಡವೆ ಉಂಟಾಗಲು ಕಾರಣವಾಗಿರುತ್ತವೆ.

ಮೊಡವೆಗಳು ಬಂದರೂ ಅವುಗಳ ಕಲೆ ಉಳಿಯದಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚು ಕರಿದ ಪದಾರ್ಥಗಳ ಸೇವನೆ ಬೇಡ. ಮಲಬದ್ಧತೆಯ ತೊಂದರೆಯಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಬೇಕು. ದಿನಕ್ಕೆ ನಾಲ್ಕೈದು ಬಾರಿ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಬೇಕು. ಮುಖದಲ್ಲಿ ಜಿಡ್ಡಿನಂಶವಿಲ್ಲದಂತೆ ನೋಡಿಕೊಳ್ಳಬೇಕು. ಮುಖ ಒರೆಸಿಕೊಳ್ಳಲು ಮೃದುವಾದ ಹತ್ತಿ ಬಟ್ಟೆಯನ್ನು ಇಟ್ಟುಕೊಳ್ಳಬೇಕು

ಜಿಡ್ಡಿನ ಆಹಾರ ಪದಾರ್ಥಗಳನ್ನು ಹೆಚ್ಚು ಸೇವನೆ ಮಾಡುವವರಲ್ಲಿ ಮೊಡವೆಯು ಹೆಚ್ಚು ಉಂಟಾಗುತ್ತದೆ. ಕೊಬ್ಬು ದೇಹದಲ್ಲಿ ಪ್ರವೇಶಿಸಿ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಹೆಚ್ಚಾದ ಕೊಬ್ಬು ತೈಲಗ್ರಂಥಿಗಳ ಮೂಲಕ ಹೊರಹೋಗುತ್ತದೆ. ಅದು ಹೊರಹೋಗುವಾಗ ರಂಧ್ರಗಳನ್ನು ಪ್ರಚೋದಿಸುವುದಲ್ಲದೇ ಮೊಡವೆಗಳಿಗೆ ಕಾರಣವಾಗುತ್ತದೆ. ಬೆಣ್ಣೆ, ಚೀಸ್, ಹಾಲು, ಆಲೂಚಿಪ್ಸ್, ತುಪ್ಪ, ಮಾಂಸಾಹಾರ ಮುಂತಾದವುಗಳಲ್ಲಿ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ.

ಕೆಲವೊಂದು ರೀತಿಯ ಔಷಧಿಗಳು ಮೊಡವೆಗೆ ಕಾರಣ ಆಗುತ್ತವೆ. ನಿಮ್ಮ ಚರ್ಮಕ್ಕೆ ಹೊಂದಿಕೆಯಾಗದ ಚರ್ಮ ಮತ್ತು ಮೇಕಪ್ ಉತ್ಪನ್ನಗಳನ್ನು ಬಳಸಿದಾಗ. ಮುಖದಲ್ಲಿ ಬೆವರನ್ನು ಪದೇ ಪದೇ ಅಥವಾ ಸರಿಯಾಗಿ ತೊಳೆದುಕೊಳ್ಳದಿರುವುದು ಮತ್ತು ದಿನದ ಅಂತ್ಯದಲ್ಲಿ ಮೇಕಪ್ ತೆಗೆಯದಿರುವುದು. ಪಿಸಿಓಡಿ ಸಮಸ್ಯೆಯಿದ್ದರೂ ಮೊಡವೆ ಉಂಟಾಗುತ್ತದೆ. ಮೈನೆರೆಯುವಿಕೆ ಅಥವಾ ಗರ್ಭಾವಸ್ಥೆಯಂತಹ , ಹಾರ್ಮೋನು ಬದಲಾವಣೆಯ ಸಂದರ್ಭಗಳು. ರಿಫೈನ್‍ಡ್ ಸಕ್ಕರೆ , ಉಪ್ಪು ಮತ್ತು ಕಾರ್ಬೋಹೈಡ್ರೇಟ್‍ ಗಳನ್ನು ಹೊಂದಿರುವ ಆಹಾರ ಕ್ರಮ ಕೂಡ ಮೊಡವೆಗಳಿಗೆ ಕಾರಣವಾಗಬಹುದು.

ಮುಖದ ಮೇಲಿನ ಮೊಡವೆಯನ್ನು ಮಾಯ ಮಾಡಲು ಇಲ್ಲದೆ ಸುಲಭ ಉಪಾಯ,  ಚರ್ಮದ ಆರೈಕೆಯ ಪ್ರಮುಖ ಸಾಮಾಗ್ರಿಯಾಗಿ ಲೋಳೆಸರ (ಅಲೋವೇರಾ) ಹೆಸರುವಾಸಿ. ತಾಜಾ ಅಲೋವೇರಾ ಜೆಲ್ ರಾತ್ರಿ ಬೆಳಗಾಗುವುದರ ಒಳಗೆ ಮೊಡವೆ ಸಮಸ್ಯೆಯನ್ನು ಪರಿಹರಿಸಬಲ್ಲದು.

ಮೊಡವೆಯಿಂದ ಹಾನಿಗೊಂಡ ಚರ್ಮಕ್ಕೆ ಜೇನು ತುಪ್ಪ ಲೇಪಿಸುವುದರಿಂದ ಬಹಳ ಪ್ರಯೋಜನ ಇದೆ. ಅದರಲ್ಲಿರುವ ಆ್ಯಂಟಿಬ್ಯಾಕ್ಟೀರಿಯಲ್ ಅಂಶಗಳು ಉರಿಯೂತನ್ನು ತಗ್ಗಿಸಿ, ಬೇಗ ಗುಣಮುಖವಾಗಲು ಸಹಕರಿಸುತ್ತದೆ. ಹಾನಿಗೊಂಡ ಜಾಗಕ್ಕೆ ರಾತ್ರಿ ಒಂದು ಅಥವಾ ಎರಡು ಹನಿ ಜೇನು ತುಪ್ಪ ಲೇಪಿಸಿ ಮತ್ತು ಅದನ್ನು ಬೆಳಗ್ಗೆ ತೊಳೆದು ತೆಗೆಯಿರಿ.

ಮಂಜುಗಡ್ಡೆಯ ತುಂಡನ್ನು ಒಂದು ಒಳ್ಳೆಯ ಬಟ್ಟೆಯಲ್ಲಿ ಸುತ್ತಿ, ಮೊಡವೆ ಇರುವ ಜಾಗಕ್ಕೆ ಇಡಿ. ಮಂಜುಗಡ್ಡೆಯನ್ನು ನೇರವಾಗಿ ಚರ್ಮಕ್ಕೆ ಇಡಬೇಡಿ ಅಥವಾ ಒಂದೇ ಜಾಗದಲ್ಲಿ 20 ನಿಮಿಷಗಳ ಕಾಲ ಇಡಬೇಡಿ. ನೀವು ಎರಡು ದಿನಕ್ಕೊಮ್ಮೆ ಇದನ್ನು ಮಾಡಬಹುದು.

ಹಸಿರು ಚಹಾದ ಬ್ಯಾಗನ್ನು ಬಿಸಿ ನೀರಲ್ಲಿ ಹಾಕಿ, ಸ್ವಲ್ಪ ಸಮಯದ ನಂತರ ಅದನ್ನು ತೆಗೆದು , ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಅದನ್ನು ಮೊಡವೆಗಳ ಮೇಲೆ ಇಡಿ. ರಾತ್ರಿ ಮಲಗುವ ಮೊದಲು ಹಸಿರು ಚಹಾದ ಬ್ಯಾಗನ್ನು ಮೊಡವೆ ಮೇಲೆ ಇಟ್ಟುಕೊಳ್ಳಿ. ಅದರಲ್ಲಿರುವ ಉರಿಯೂತ ನಿವಾರಕ ಅಂಶಗಳು , ಊರಿಯೂತ ಮತ್ತು ಕೆಂಪಾದ ಚರ್ಮವನ್ನು ಕಡಿಮೆ ಮಾಡಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11034
Gayathri Gowda

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು