Categories: ಸಮುದಾಯ

ಚಿಕ್ಕಮಗಳೂರು: ಹೊಗರೇಖಾನ್ ಗಿರಿ ಶ್ರೀ ಸಿದ್ದೇಶ್ವರಸ್ವಾಮಿ ರಥೋತ್ಸವ

ಚಿಕ್ಕಮಗಳೂರು: ಹೊಗರೇಖಾನ್ ಗಿರಿಯ ಶ್ರೀಸಿದ್ದೇಶ್ವರಸ್ವಾಮಿ ರಥೋತ್ಸವದ ಧಾರ್ಮಿಕಕಾರ್ಯಕ್ರಮಗಳು ಶುಕ್ರವಾರ ತಡರಾತ್ರಿ ಸಂಪನ್ನಗೊಂಡವು.

ಬೀರೂರು ಸಮೀಪದ ಹೊಗರೇಖಾನ್ ಗಿರಿ ಪಶ್ಚಿಮಘಟ್ಟಸಾಲಿನ ಹಸಿರು ವನಸಿರಿ-ಖನಿಜನಿಧಿಯ ನಡುವೆ ನೆಲೆಸಿರುವ ಸಿದ್ದೇಶ್ವರಸ್ವಾಮಿ ಸುತ್ತಮುತ್ತಲಿನ ಹತ್ತಾರು ಗ್ರಾಮದ ಆರಾಧ್ಯದೈವ. ವಸಂತvಋತು, ಚೈತ್ರಮಾಸ, ಶುಕ್ಲಪಕ್ಷ ತ್ರಯೋದಶಿ ಪುಬ್ಬನಕ್ಷತ್ರದಲ್ಲಿ ಬೆಟ್ಟದಮೇಲೆ ರಥೋತ್ಸವವು ಸಾವಿರಾರುಭಕ್ತರ ಹರ್ಷೋದ್ಘಾರಗಳೊಂದಿಗೆ ನಡೆಯಿತು.

ಸುಡುಬಿಸಿಲಿನಲ್ಲೂ ಜಮಾಯಿಸಿದ್ದ ಭಕ್ತರು ಹೂವು-ಹಣ್ಣು ರಥದತ್ತ ತೂರಿ ಮುಗಿಲುಮುಟ್ಟುವ ಸಿದ್ದೇಶ್ವರಸ್ವಾಮಿಯ ಜಯಕಾರದೊಂದಿಗೆ ರಥ ಎಳೆದು ಶ್ರದ್ಧಾಭಕ್ತಿಯನ್ನು ಸಮರ್ಪಿಸಿದರು. ಜಂಗಮಬಳಗದ ಶಿವಸಂಕೀರ್ತನೆ ಗಮನಸೆಳೆಯಿತು. ಪರಂಪರಾನುಗತವಾಗಿ ಬಂದ ರಾಗಿಮುದ್ದೆ, ಪಾಯಸ, ಸೊಪ್ಪಿನಸಾರು, ಹಲಸಿನಬಡುಕು ಹುಳಿ, ಮಾವಿನಕಾಯಿಚಟ್ನಿ, ಕಡಲೆಕಾಳು ಈರುಳ್ಳಿಗೊಜ್ಜು ಪ್ರಸಾದವನ್ನು ಸಾಮೂಹಿಕವಾಗಿ ಸಾವಿರಾರು ಭಕ್ತರು ಸ್ವೀಕರಿಸಿದರು.

ಜಾತ್ರಾ ಕಾರ್ಯಕ್ರಮಗಳನ್ನು ಹೊಗರೇಖಾನ್ ಮಠದ ಆವರಣದಲ್ಲಿ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಎಚ್.ಎಸ್.ಉಮಾಮಹೇಶ್ವರಯ್ಯ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಗುಹಾಂತರ ದೇವಾಲಯದ ಮಠದ ಮೂಲಮೂರ್ತಿಗೆ ರುದ್ರಾಭಿಷೇಕ, ಅಷ್ಟೋತ್ತರಾದಿ ಪೂಜಾಕಾರ್‍ಯಗಳು ನಡೆದವು. ರಾತ್ರಿ ಹೊಗರೇಹಳ್ಳಿಯ ಶ್ರೀಸಿದ್ದೇಶ್ವರಸ್ವಾಮಿ ದೇಗುಲದಲ್ಲಿ ಮದುವಣಿಗೆ ಶಾಸ್ತ್ರ, ತಡರಾತ್ರಿ ನಂದಿವಾಹನೋತ್ಸವ ನೆರವೇರಿತು.

ಶನಿವಾರ ಶ್ರೀಸ್ವಾಮಿಗೆ ವಿಶೇಷ ಪೂಜೆಯೊಂದಿಗೆ ನವಿಲು ಉತ್ಸವ, ಭಾನುವಾರ ಕುದುರೆವಾಹನೋತ್ಸವ, ರಾತ್ರಿ ಕಲ್ಯಾಣೋತ್ಸವ, ತಡರಾತ್ರಿ ೧೨ಗಂಟೆಗೆ ಗಜವಾಹನೋತ್ಸವ ನಡೆಯಿತು. ಸೋಮವಾರ ಪಲ್ಲಕ್ಕಿಉತ್ಸವ, ಮಂಗಳವಾರ ಮಹಾರಥೋತ್ಸವದ ನಂತರ ೧೦೧ ಎಡೆಸೇವೆ, ಬಲಿಪೂಜೆ, ಸಂತರ್ಪಣೆ ನಡೆಯಿತು.

ಬುಧವಾರ ಓಕಳಿ, ಉಯ್ಯಾಲೆ ಉತ್ಸವ, ನಿನ್ನೆ ರಾತ್ರಿ ವಿಶೇಷಪೂಜೆಯೊಂದಿಗೆ ಜಾತ್ರಮಹೋತ್ಸವ ಸಂಪನ್ನಗೊಂಡಿತು. ಗಿರಿಯಮೇಲೆ ಹಾಗೂ ಹೊಗರೇಹಳ್ಳಿಯ ದೇವಸ್ಥಾನಗಳಲ್ಲಿ ಪೂಜಾದಿಉತ್ಸವಗಳು ಉಮಾಮಹೇಶ್ವರಯ್ಯ, ಹರಿಶ್ಚಂದ್ರಕುಮಾರ್, ಶಿವಾನಂದಯ್ಯ, ಚಂದ್ರಶೇಖರಯ್ಯ, ಅರ್ಚಕ ರುದ್ರಯ್ಯ ಮತ್ತಿತರರ ನೇತೃತ್ವದಲ್ಲಿ ಸಂಪನ್ನಗೊಂಡಿತು.

Ashika S

Recent Posts

ರಿಚರ್ಡ್‌ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ

ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ…

5 hours ago

ಜಿಯೋ ಬಂಪರ್‌ ಆಫರ್‌ : 15 ಒಟಿಟಿ ಆ್ಯಪ್ಲಿಕೇಷನ್‌ ಜೊತೆ ಅನ್‌ಲಿಮಿಟೆಡ್ ಡೇಟಾ ಪ್ಲಾನ್

ಜಿಯೋ ಇದೀಗ ಮತ್ತೊಂದು ಹೊಚ್ಚ ಹೊಸ ಪ್ಲಾನ್ ಘೋಷಿಸಿದೆ. ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್, ಅಮೆಜಾನ್ ಪ್ರೈಮ್ ಸೇರಿದಂತೆ 15 ಒಟಿಟಿ…

5 hours ago

ಕಾರಿನಲ್ಲಿ ಆಕಸ್ಮಿಕ ಬೆಂಕಿ : ವ್ಯಕ್ತಿ ಸಜೀವ ದಹನ

ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬಾಗಲಕೋಟೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ.ಕಾರಿನಲ್ಲಿದ್ದ ಸಂಗನಗೌಡ…

5 hours ago

ವಿಧಾನಪರಿಷತ್ ಚುನಾವಣೆ : ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬಿಜೆಪಿ

ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 6 ಕ್ಷೇತ್ರಗಳ…

6 hours ago

ಹಾಡಹಗಲೇ ಚಾಕುವಿನಿಂದ ಇರಿದು ಯುವಕನ ಭೀಕರ ಹತ್ಯೆ

ಚಾಕುವಿನಿಂದ ಇರಿದು ಹಾಡಹಗಲೇ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ‌ಮಣ್ಣೂರು ಗ್ರಾಮದಲ್ಲಿ ನಡೆದಿದೆ. ಪ್ರೀತಿ…

6 hours ago

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಬಿತ್ತು ಧರ್ಮದೇಟು

ಮೊಬೈಲ್‌ ಕಳ್ಳತನಕ್ಕೆ ಯತ್ನಿಸಿದ ಕಳ್ಳಿಗೆ ಸಾರ್ವಜನಿಕರೇ ಧರ್ಮದೇಟು ನೀಡಿದ ಘಟನೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ಇಂದು ಸಂಭವಿಸಿದೆ

6 hours ago