ಚಾಮರಾಜನಗರ: ಸಾಮಾನ್ಯವಾಗಿ ಎಲ್ಲ ಕಡೆಯೂ ಆಂಜನೇಯನ ದೇಗುಲವಿರುತ್ತದೆ. ಆದರೆ ವಾನರನಿಗಾಗಿಯೇ ನಿರ್ಮಿಸಿದ ದೇಗುಲವೊಂದು ಜಿಲ್ಲೆಯಲ್ಲಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ನಿಜ.
ಚಾಮರಾಜನಗರ ತಾಲೂಕಿನ ಶಿವಪುರ ಗ್ರಾಮದಲ್ಲಿ ವಾನರನ ದೇಗುಲವಿದ್ದು, ಈ ದೇಗುಲದಲ್ಲಿ ಪ್ರತಿನಿತ್ಯವೂ ವಾನರನಿಗೆ ಪೂಜಾಕೈಂಕರ್ಯಗಳು ನಡೆಯುತ್ತಿವೆ. ಇಷ್ಟಕ್ಕೂ ಈ ವಾನರ ದೇಗುಲ ನಿರ್ಮಾಣವಾಗಿದ್ದು, ಹೇಗೆ ಎಂಬುದನ್ನು ನೋಡುವುದಾದರೆ ಶಿವಪುರ ಗ್ರಾಮದಲ್ಲಿ 2017ರಲ್ಲಿ ಕೋತಿ ಮರಿಯೊಂದು ಆಕಸ್ಮಿಕವಾಗಿ ಮೃತಪಟ್ಟಿತ್ತು.
ಹೀಗೆ ಮೃತಪಟ್ಟ ಕೋತಿ ಮರಿಯನ್ನು ಗ್ರಾಮಸ್ಥರು ಎಸೆಯದೆ ಅದನ್ನು ಶಾಸ್ತ್ರೋಕ್ತವಾಗಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಿ ಸಮಾಧಿ ಮಾಡಿದರು. ಅದಾದ ನಂತರ ಸ್ಥಳೀಯ ಪುರೋಹಿತರ ಸಲಹೆ ಪಡೆದು ಪುಟ್ಟದಾದ ಗುಡಿಯೊಂದನ್ನು ನಿರ್ಮಿಸಿ ಅದರ ಉದ್ಘಾಟನೆ ಮಾಡಿ ಪೂಜೆ ಸಲ್ಲಿಸಿದರು. ಆ ವರ್ಷ (2017) ಶ್ರಾವಣ ಮಾಸದ ಶನಿವಾರ ಪೂಜಾ ಕಾರ್ಯವನ್ನು ನಡೆಸಲಾಗಿತ್ತು. ಅಲ್ಲಿಂದ ಇಲ್ಲಿವರೆಗೆ ಜನ ಈ ದೇಗುಲಕ್ಕೆ ಕೈ ಮುಗಿಯುತ್ತಾ ಬರುತ್ತಿದ್ದಾರೆ.
ಒಟ್ಟಾರೆ ಶಿವಪುರ ಗ್ರಾಮದಲ್ಲಿರುವ ಪುಟ್ಟದಾದ ವಾನರನ ದೇಗುಲ ಗಮನಸೆಳೆಯುತ್ತಿದ್ದು, ಎಲ್ಲರೂ ಈ ದೇಗುಲಕ್ಕೆ ನಮಿಸಿ ಮುಂದೆ ಸಾಗುವುದು ಮಾಮೂಲಿಯಾಗಿದೆ.
ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ದಾಖಲಾಗಿದೆ.ಶಾಸಕರು ತನ್ನ…
ಕಾರು ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್ ಮಾಡಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಬ್ಯಾಂಕ್ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.
ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…
ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…