ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಪ್ರಥಮ ವಾರ್ಷಿಕ ವಿಶೇಷ ಶಿಬಿರ “ಸ್ವಸ್ತಿಕ ಹಳ್ಳಿ ಹಬ್ಬವು” ಮೇ 8 ರಿಂದ 14ರ ವರೆಗೆ ಹೊಳ್ಳರ ಬೈಲುನೆತ್ರಕೆರೆ ಬಂಟ್ವಾಳ ತಾಲೂಕಿನಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಧ್ಯೇಯದೊಂದಿಗೆ ನಡೆಯಲಿರುವುದು.
ಈ ಕಾರ್ಯಕ್ರಮವನ್ನು ಬಂಟ್ವಾಳ ವಿಧಾನಸಭಾ ಶಾಸಕ ಯು. ರಾಜೇಶ್ ನಾಯಕ್, ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಅಡಿಷನಲ್ ಎಸ್ಪಿ, ಕುಮಾರ್ ಚಂದ್ರ. ಮಂಗಳೂರು ವಿಶ್ವವಿದ್ಯಾನಿಲಯ,ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾ ಅಧಿಕಾರಿ, ಡಾ. ನಾಗರತ್ನ ಕೆ, ,ಬಿಕ್ವಿ ಸಾಫ್ಟ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ನಿರ್ದೇಶಕರು ನೆತ್ರಕೆರೆಗುತ್ತು ನಾರಾಯಣ ಹೊಳ್ಳ, ಬಂಟ್ವಾಳ, ಪ್ರಸಿದ್ಧ ವಕೀಲರುರಮೇಶ್ ಉಪಾಧ್ಯಾಯ, ಬಂಟ್ವಾಳ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರು ತಿರುಳೇಶ್ ಬೆಳ್ಳೂರು, ಕೃಷಿಕರು ಜನಾರ್ದನ ಸಾಲ್ಯಾನ್ ಮುಂಡಾಜೆ, ಉಪಸ್ಥಿತರಿರುವರು.
ಈ ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಏಳು ದಿನದ ರಂಗತರಬೇತಿ, ಶೈಕ್ಷಣಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ, ಶ್ರೀ ವಿಠಲ್ ನಾಯಕ್ ಕಲ್ಲಡ್ಕ ಇವರ ಗೀತ ಸಾಹಿತ್ಯ ವೈವಿಧ್ಯ, ಸ್ಥಳೀಯರಿಗೆ ಉಚಿತ ವೈದ್ಯಕೀಯ ಶಿಬಿರ ಹಾಗೂ ಹೊನಲು ಬೆಳಕಿನ ಕ್ರೀಡಾಕೂಟ ಮತ್ತು ಇನ್ನಿತರ ವಿನೋದಾವಳಿಗಳು ನಡೆಯಲಿರುವುದು.
ಶಿಬಿರದ ಪ್ರಯುಕ್ತ ತುಳು ಪರಂಪರೆಯ ಮೆರುಗನ್ನು ಉಳಿಸಿ ಬೆಳೆಸಿದ ಡಾ. ತುಕರಾಮ ಪೂಜಾರಿಯವರನ್ನು ಸ್ವಸ್ತಿಕ ಸೇವಾರತ್ನ ಬಿರುದಿನೊಂದಿಗೆ ಗೌರವಿಸಲಾಗುವುದು.
ಈ ಶಿಬಿರವು ಡಾ. ರಾಘವೇಂದ್ರ ಹೊಳ್ಳ ಇವರ ಅಧ್ಯಕ್ಷತೆಯಲ್ಲಿ, ಕಾಲೇಜಿನ ಪ್ರಾಚಾರ್ಯರಾದ ಡಾ. ಮಾಲಿನಿ ಎನ್. ಹೆಬ್ಬಾರ್ ಇವರ ಮಾರ್ಗದರ್ಶನದಲ್ಲಿ ಶಿಬಿರಾಧಿಕಾರಿಯಾದ ಶ್ರೀಮತಿ ವಿದ್ಯಾಲಕ್ಷ್ಮಿ ಪಿ. ಶೆಟ್ಟಿಯವರ ನೇತೃತ್ವದೊಂದಿಗೆ
ನಡೆಯಲಿರುವುದು.