ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಆದೇಶವನ್ನು ಹೊರಡಿಸಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಮತ್ತು ಸಮಾಜದ ವತಿಯಿಂದ ಸನ್ಮಾನ ನಡೆಯಿತು.
ಸಮುದಾಯದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಹಾಗೂ ಪರಮಪೂಜ್ಯ ಡಾಕ್ಟರ್ ಪ್ರಣವಾನಂದ ಮಹಾಸ್ವಾಮೀಜಿ ನೇತೃತ್ವದಲ್ಲಿ ಸನ್ಮಾನ ನಡೆಯಿತು.
ಕನ್ನಡ ರತ್ನ ಡಾಕ್ಟರ್ ಮಂಚೇಗೌಡ ಬಿಹೆಚ್ ಪಾದಯಾತ್ರೆಯ ರಾಜ್ಯ ಸಂಚಾಲಕ ಗುರುರಾಜ್ , ಸಿದ್ದರನ್ ಸಂಸ್ಥೆ ಮಾಲೀಕ ಸಂತೋಷ್ ಕುಮಾರ್ ತವನಂದಿ, ಐತಿಹಾಸಿಕ ಪಾದಯಾತ್ರೆ ಹಣಕಾಸು ವಿಭಾಗದ ಮುಖ್ಯಸ್ಥ ನಾಗರಾಜ್ ನಾಯ್ಕ ಸಾಗರ ಐತಿಹಾಸಿಕ ಪಾದಯಾತ್ರೆಯ ರಾಜ್ಯ ಉಪ ಸಂಚಾಲಕ ಶಿವರಾಜ್ ಗುತ್ತೇದಾರ್ ಭಾಗವಹಿಸಿದ್ದರು.