News Karnataka Kannada
Wednesday, May 01 2024
ಆರೋಗ್ಯ

ಬಿಸಿಲ ಝಳದೊಂದಿಗೆ ಏರಿಕೆಯಾಗುತ್ತಿದೆ ಶಾಖಾಘಾತ: ಡಾ.ನವೀನ್ ಚಂದ್ರ ಕುಲಾಲ್ ಎಚ್ಚರಿಕೆ

ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ ಎದುರಾಗಿದೆ.
Photo Credit : NewsKarnataka

ಮಂಗಳೂರು: ಕಡಲನಗರಿ ಮಂಗಳೂರಿನಲ್ಲಿ ಬಿಸಿಲದಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಣ ಬಿಸಿಲಿನಿಂದ ಜನ ತತ್ತರಿಸಿ ಹೋಗಿದ್ದಾರೆ.ಈ ನಡುವೆ ಶಾಖಾಘಾತದ ಭೀತಿ ನಗರಕ್ಕೆ ಎದುರಾಗಿದೆ.

ಉರಿ ಸೆಕೆಗೆ ಬೆವೆತು ಹೋಗಿದ್ದಾರೆ. ಈ ನಡುವೆ ಶಾಖಾಘಾತದ ಭೀತಿ ಎದುರಾಗಿದೆ.. ವೈದ್ಯರು ಎಚ್ಚರಿಕೆಯಿಂದ ಇರಿ ಅಂತ ಸೂಚನೆ ನೀಡಿದ್ದಾರೆ.

ಒಂದು ಪ್ರದೇಶದ ಸಾಮಾನ್ಯ ಉಷ್ಣತೆಗಿಂತ 4.5 ರಿಂದ 6.4ರಷ್ಟು ಹೆಚ್ಚಾದಲ್ಲಿ ಶಾಖಾಘಾತ ಸಂಭವಿಸುತ್ತದೆ. ಇದರಿಂದ ಕೈಕಾಲುಗಳಲ್ಲಿ ಊತ, ಮೈಮೇಲೆ ಬೆವರುಸಾಲೆ ಮೂಡುವುದು, ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ಇದು ಎದೆಯಲ್ಲಿ ಸೆಳೆತ ಉಂಟು ಮಾಡುವ ಸಾಧ್ಯತೆಯಿದೆ. ಪರಿಣಾಮ ಹೃದಯಾಘಾತ ಸಂಭವಿಸಬಹುದು. ತಲೆಸುತ್ತುವಿಕೆ ಉಂಟಾಗಬಹುದು. ಅಲ್ಲದೆ ಶಾಖಾಘಾತ ಹೆಚ್ಚಾಗಿ ಮರಣ ಸಂಭವಿಸುವ ಸಾಧ್ಯತೆಯಿದೆ.

ಮಕ್ಕಳು, ವೃದ್ಧರು, ಗರ್ಭಿಣಿಯರು, ಮಾನಸಿಕ ಸ್ಥಿಮಿತ ಕಳೆದುಕೊಂಡವರು, ವಿವಿಧ ರೋಗಗಳಿಂದ ಬಳಲುತ್ತಿರುವವರು ಶಾಖಾಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಶಾಖಾಘಾತಕ್ಕೆ ಒಳಗಾದವರ ಮಾನಸಿಕ ಸ್ಥಿಮಿತ ಏರುಪೇರಾಗಬಹುದು. ದೇಹದ ಉಷ್ಣತೆ 40° ಗಿಂತಲೂ ಹೆಚ್ಚಾಗಬಹುದು. ಹೀಗಾದಾಗ ವಿಪರೀತ ಜ್ವರ ಬಂದಾಗ ವ್ಯಕ್ತಿಯೋರ್ವನು ಯಾವ ರೀತಿ ವರ್ತಿಸುತ್ತಾನೋ ಆ ರೀತಿ ವರ್ತಿಸಬಹುದು‌. ಪ್ರಜ್ಞೆ ಕಳೆಯಬಹುದು, ಈ ವೇಳೆ ಸೂಕ್ತ ಚಿಕಿತ್ಸೆ ಸಿಕ್ಕದಿದ್ದಲ್ಲಿ ಜೀವಹಾನಿಯೂ ಆಗಬಹುದು. ಸದ್ಯ ಮಂಗಳೂರಿನಲ್ಲಿ ಬಿಸಿಲ ದಗೆ ಹೆಚ್ಚಾಗಿರುದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಕರಾವಳಿಯಲ್ಲಿ ತಗಡು ಶೀಟು ಅಳವಡಿಸಿರುವ ಮುಚ್ಚಿದ ಕೋಣೆಯಲ್ಲಿ ಇರುವವರು, ಸರಿಯಾಗಿ ಗಾಳಿ ಆಡದಂತಹ ಜಾಗಗಳಲ್ಲಿ ವಾಸಿಸುವವರು, ಫ್ಯಾಕ್ಟರಿಗಳಲ್ಲಿ, ಕಲ್ಲು ಕೋರೆಗಳಲ್ಲಿ ಕೆಲಸ ಮಾಡುವವರು ಬಹಳ ಜಾಗರೂಕರಾಗಿರುವ ಅವಶ್ಯಕತೆ ಇದೆ. ಜೊತೆಗೆ ಅನಗತ್ಯ ಬಿಸಿಲಿನಲ್ಲಿ ಓಡಾಟ ನಿಲ್ಲಿಸಿ ಅಂತ ಆರೋಗ್ಯ ಇಲಾಖೆ ಎಚ್ಚರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು