ಮಂಗಳೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಯೋಜನೆಯಡಿ ಜಿಲ್ಲಾ ವಿಲಕಚೇತನರ ಪುನರ್ವಸತಿಕೇಂದ್ರದ ವತಿಯಿಂದ ವಿಶ್ವ ಶ್ರವಣ ದಿನಾಚರಣೆಯನ್ನು ಮಾ.3ರ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ನಗರದ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಶ್ರವಣದೋಷವನ್ನುತಪ್ಪಿಸಲು ತೆಗೆದುಕೊಳ್ಳಬೇಕಾದ ಮುನ್ನಚ್ಚರಿಕೆಕ್ರಮಗಳ ಜೊತೆಗೆ ಶ್ರವಣದೋಷದ ಪ್ರಾಮುಖ್ಯತೆಯನ್ನು ಡಿ.ಡಿ.ಆರ್.ಸಿಯ ಶ್ರವಣ ಶಾಸ್ತ್ರಜ್ಞ ರಯಾಟನ್ ಡಿಸೋಜಾ ಅವರು ತಿಳಿಸಿದರು.
ಲಯನ್ಸ್ ಲಿಂಬ್ ಸೆಂಟರ್ ಫಾರ್ ದಿ ಫಿಸಿಕಲಿ ಹ್ಯಾಂಡಿಕ್ಯಾಪ್ಡ್ ಸಂಸ್ಥೆಯ ಕಾರ್ಯದರ್ಶಿ ಡಾ.ಕೆ.ರಾಮಚಂದ್ರ ಕಾಮತ್ ಅವರು ಜಿಲ್ಲಾ ಪುನರ್ವಸತಿ ಕೇಂದ್ರದ ಬಗ್ಗೆ ದಿವ್ಯಾಂಗ ಚೇತನರಿಗೆ ಶ್ರವಣದೋಷದ ಬಗ್ಗೆ ಮಾಹಿತಿ ನೀಡಿದರು.
ನಂತರ 15 ಜನ ದಿವ್ಯಾಂಗ ಫಲಾನುಭವಿಗಳಿಗೆ ಶ್ರವಣ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.
ಡಿ.ಡಿ.ಆರ್.ಸಿಯ ನೋಡಲ್ಅಧಿಕಾರಿ ಬಸವರಾಜ್ಎನ್.ಬಿ.,ಫಿಸಿಯೋಥೆರಪಿಸ್ಟ್ ಸಮೀಕ್ಷಾ ಎಸ್.ಶೆಟ್ಟಿ ಮತ್ತು ಮೊಬಿಲಿಟಿ ಭೋಧಕ ಡಿ.ಎಸ್. ನಾಗರಾಳ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂದಿ ಗೀತಾದೇವಾಡಿಗ ಉಪಸ್ಥಿತರಿದ್ದರು.