News Karnataka Kannada
Wednesday, May 01 2024
ಮಂಗಳೂರು

ಕೋಟಕ್ ಮಹೀಂದ್ರ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹೊಸದಾಗಿ ನವೀಕರಿಸಿದ ಮಕ್ಕಳ ತೀವ್ರ ನಿಗಾ ಘಟಕದ ಉದ್ಘಾಟನೆ

New Project
Photo Credit :

ಮಂಗಳೂರು:   ಯೆನೆಪೋಯ   ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರ‍್ನಾಟಕ ಮಹೀಂದ್ರ ಫೌಂಡೇಶನ್ ತನ್ನ ಸಾಮಾಜಿಕ ಜವಾಬ್ದಾರಿ ಯೋಜನೆಯ ಭಾಗವಾಗಿ ಪ್ರಾಯೋಜಿಸಿದ ನೂತನವಾಗಿ ನವೀಕರಿಸಿದ ಮಕ್ಕಳ ತೀವ್ರ ನಿಗಾ ಘಟಕದ (ಪಿಐಸಿಯು) ಉದ್ಘಾಟನೆಯು 14.11.2021 ರಂದು ಬೆಳಿಗ್ಗೆ 11.00 ಗಂಟೆಗೆ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.  ಗೌರವ ಅತಿಥಿಗಳಾಗಿ  ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯ  ಉಪಾಧ್ಯಕ್ಷ, ಪ್ರಾದೇಶಿಕ ವ್ಯವಹಾರ, ಮುಖ್ಯಸ್ಥ ಸೇವಾ ಕುಮಾರ್ ಎಸ್ ಉದ್ಘಾಟಿಸದರು.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಯೇನೆಪೊಯ ಆಸ್ಪತ್ರೆ ಕೋವಿಡ್  ಸಂದರ್ಭದಲ್ಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು ‘ವೈದ್ಯರ ನಡೆ, ಹಳ್ಳಿಯ ಕಡೆ’ ಕಾರ್ಯಕ್ರಮ ಮೂಲಕ  ಸಾಮಾನ್ಯ ಜನರಿಗೂ ಆರೋಗ್ಯ ಸೇವೆ ತಲುಪಿಸುತ್ತಿರುವುದು ಶ್ಲಾಘನೀಯ ಹಾಗೂ ಇದೇ ರೀತಿ ಮುಂದೆಯು ಸಹಕರಿಸಬೇಕಾಗಿ ವಿನಂತಿಸಿದರು.

ಯೆನೆಪೋಯ (ಪರಿಗಣಿಸಲ್ಪಟ್ಟ)ವಿಶ್ವ ವಿದ್ಯಾನಿಲಯದ ಗೌರವಾನ್ವಿತ ಕುಲಪತಿ ಶ್ರೀ ಯೆನೆಪೋಯ ಅಬ್ದುಲ್ಲ ಕುಂಞಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ  ಅಂತರ್ಜಾಲ ಮೂಲಕ ಮಾತನಾಡಿದರು. ಕೋಟಕ್ ಮಹೀಂದ್ರ ಫೌಂಡೇಶನಿನ ಆರ್ಥಿಕ ಬೆಂಬಲದೊಂದಿಗೆ ಯೆನೆಪೋಯ ವೆೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ವಿಭಾಗದಲ್ಲಿ  ಹೆಚ್ಚುತ್ತಿರುವ ಮಕ್ಕಳ ಚಿಕಿತ್ಸಾ ಬೇಡಿಕೆಯನ್ನು ಪೂರೈಸುವ ಸಲುವಾಗಿ ಆಧುನಿಕ ಸೌಲಭ್ಯಗಳನ್ನು ಅಳವಡಿಸಿದ್ದು  ಕೈಗೆಟಕುವ ದರದಲ್ಲಿ ಚಿಕಿತ್ಸೆಯನ್ನು ಪಡೆಯುವ  ವ್ಯವಸ್ಥೆ ಮಾಡಲಾಗಿದೆ. ಪ್ರಸಕ್ತ ಈ ತೀವ್ರ ನಿಗಾ ವಿಭಾಗದಲ್ಲಿ ಪರಿಣಿತ ಮಕ್ಕಳ ತಜ್ಞರು ಹಾಗೂ ದಾದಿಯರ ತಂಡದೊಂದಿಗೆ ಪ್ರಸಕ್ತ 16 ಹಾಸಿಗೆ ಹಾಗೂ 6 ವೆಂಟಿಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದ ಬಡವರ್ಗಕ್ಕೆ ಇನ್ನಷ್ಟು ಅನುಕೂಲ ಸಿಗಲಿದೆ. ಕೋಟಕ್ ಮಹೇಂದ್ರ ಬ್ಯಾಂಕ್ ಜಂಟಿ ವ್ಯವ ಸ್ಥಾಪಕ ನಿರ್ದೇಶಕ ದೀಪಕ್ ಗುಪ್ತ ಅಂತರ್ಜಾಲ ಮೂಲಕ ಶುಭ ಹಾರೈಸಿದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು