News Karnataka Kannada
Friday, May 03 2024
ಆರೋಗ್ಯ

ಕೊಡಗು ಕಾಂಗ್ರೆಸ್ ಸೇವಾದಳದ ಸಭೆ : ಸಂಘಟನೆಗೆ ಪ್ರಮುಖರ ಕರೆ

Photo Credit :

ಕೊಡಗು ಕಾಂಗ್ರೆಸ್ ಸೇವಾದಳದ ಸಭೆ : ಸಂಘಟನೆಗೆ ಪ್ರಮುಖರ ಕರೆ

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಸೇವಾದಳದ ಸಭೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳ ಮಹಿಳಾ ವಿಭಾಗದ ಸಂಘಟಕಿ ಪ್ರೇಮಾ ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಸೇವಾದಳದ ಮುಖ್ಯ ಸಂಘಟಕ ಪ್ಯಾರಿಜಾನ್, ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವ ಸೇವಾದಳ ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದರು. ಸುಮಾರು 95 ವರ್ಷಗಳ ಇತಿಹಾಸವುಳ್ಳ ಸೇವಾದಳವನ್ನು ಡಾ.ನಾರಾಯಣನ್ ಸುಬ್ಬರಾವ್ ಹರ್ಡಿಕರ್ ಸ್ಥಾಪಿಸಿದರು. ಕೊಡಗಿನಲ್ಲಿ ಈ ಹಿಂದೆ ಸೇವಾದಳದ ಅಧ್ಯಕ್ಷರಾಗಿ ಚೌರೀರ ಪೂವಯ್ಯ ಹಾಗೂ ನಿತ್ಯ ಅವರು ಉತ್ತಮ ಸೇವೆಯನ್ನು ನೀಡಿದ್ದಾರೆ. ಸೇವಾದಳದಲ್ಲಿ ಶಿಸ್ತಿಗೆ ಮೊದಲ ಆದ್ಯತೆ ಎಂದ ಪ್ಯಾರಿಜಾನ್ ನ.26 ರಂದು ಹಾಸನದಲ್ಲಿ ನಡೆಯುವ ವಿಭಾಗ ಮಟ್ಟದ ಸಭೆಗೆ ಜಿಲ್ಲಾ ಕಾಂಗ್ರೆಸ್ ಸೇವಾದಳದ ಸಂಘಟಕರು ಹಾಜರಾಗುವಂತೆ ತಿಳಿಸಿದರು.

ವಿಭಾಗೀಯ ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷ ಗೋಪಾಲ್ ಗೌಡ ಮಾತನಾಡಿ ಪ್ರತೀ ತಿಂಗಳು ಸಭೆ ನಡೆಸಿ ಸಂಘಟನೆಯನ್ನು ಬಲ ಪಡಿಸಬೇಕೆಂದರು.

ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ರಾಜ್ಯ ಸೇವದಾಳದ ಮುಖ್ಯ ಶಿಕ್ಷಕ ವಿಶ್ವನಾಥ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಉಸ್ಮಾನ್, ಬ್ಲಾಕ್ ಅಧ್ಯಕ್ಷ ಕಾನೆಹಿತ್ಲು ಮೊಣಪ್ಪ, ಎಂ.ಎ.ಉಸ್ಮಾನ್, ಬೋಜಮ್ಮ, ಪಿ.ಯು.ಪೂಣಚ್ಚ, ಐ.ಹೆಚ್.ಮೊಹಮ್ಮದ್, ಎ.ಜಿ.ರಮೇಶ್, ಡಿ.ಎಲ್.ಸುಬ್ಬಯ್ಯ, ಎಂ.ಎಲ್.ಸೈನುದ್ಧೀನ್, ಉಪಾಧ್ಯಕ್ಷರಾದ ಗಾಯತ್ರಿ ನರಸಿಂಹ, ಜಿಲ್ಲಾ ಸೇವಾದಳದ ಕಾರ್ಯದರ್ಶಿ ಎನ್.ಎಂ.ಯುಸೂಫ್, ಹೆಚ್.ಬಿ. ಪಾರ್ವತಿ, ಯಂ.ಯು.ಮುದ್ದಪ್ಪ, ನಗರಸಭಾ ಮಾಜಿ ಅಧ್ಯಕ್ಷರಾದ ಜುಲೇಖಾಬಿ, ಎನ್.ದಾಮೋದರ್ ಆಚಾರ್ಯ, ಹೆಚ್.ಯಂ.ಮಹಾದೇವ್, ವಿರಾಜಪೇಟೆ ಸೇವಾದಳದ ಬ್ಲಾಕ್ ಅಧ್ಯಕ್ಷ ಶರಣು ನಂಜಪ್ಪ, ಎಂ.ಎ. ಮುನೀರ್ ಮಾಚಾರ್, ಶಶಿ, ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರೇಮ ಕೃಷ್ಣಪ್ಪ ಸ್ವಾಗತಿಸಿ, ಕಾನೆ ಹಿತ್ಲು ಮೊಣ್ಣಪ್ಪ ವಂದಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು