ಆರೋಗ್ಯವೆ ಭಾಗ್ಯ ಅನ್ನೊ ಮಾತಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಮಾತ್ರ ಆರೋಗ್ಯ ಸಮಸ್ಯೆ ಮನುಷ್ಯನ ಬೆಂಬಿಡದೆ ಒಂದಾದ ಮೇಲೆ ಒಂದರಂತೆ ಕಾಡುತ್ತಲೇ ಇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಔಷಧಿಗಳು ಕೂಡಾ ಇವೆ. ಆದರೆ ಅವುಗಳಿಗೆ ನಾವು ಸಾವಿರಾರು/ಲಕ್ಷಾಂತರ ರೂಪಾಯಿಗಳನ್ನ ವ್ಯಯಿಸಬೇಕಾಗುತ್ತದೆ. ಯಾವುದೇ ಹಣವನ್ನು ವ್ಯಯಿಸದೆ ನಮ್ಮ ಕೈಯಲ್ಲೇ ಆರೋಗ್ಯ ಇದೆ ಅಂದ್ರೆ ನೀವು ನಂಬುತ್ತೀರಾ? ಖಂಡಿತಾ ನಂಬಲೇ ಬೇಕು ಹೇಗೆ ಅಂತೀರಾ….
ಹಲವರನ್ನ ಬಾಧಿಸುವ ಸಮಸ್ಯೆ ಎಂದರೆ ಅದು ಆಮಶಂಕೆ ಅಥವಾ ರಕ್ತಭೇದಿ (ಪೈಲ್ಸ್). ಸಾಮಾನ್ಯವಾಗಿ ದೇಹದ ಉಷ್ಣತೆ ಹೆಚ್ಚಾದಾಗ ಮಲದ ಜೊತೆಯಲ್ಲಿ ರಕ್ತವು ಸ್ರವಿಸುತ್ತದೆ. ಈ ಆಮಶಂಕೆ ಮುಂದುವರೆದರೆ ಆಪರೇಷನ್ ಕೂಡಾ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಬಹುದು. ಆಮಶಂಕೆ ಇರುವ ವ್ಯಕ್ತಿಗಳಿಗೆ ಒಂದೇ ಕಡೆ ಕೂರಲೂ ಸಹ ಆಗುವುದಿಲ್ಲಾ… ಅಯ್ಯೋ ಆಮಶಂಕೆ ಇಂದ ಇಷ್ಟೆಲ್ಲಾ ಪ್ರಾಬ್ಲಮ್ ಇದ್ಯಾ ಅಂತಾ ಹೆದರಬೇಡಿ ಅದೇ ಆಮಶಂಕೆಯು ಬರದಂತೆ ತಡೆಯಲು ಅಷ್ಟೆ ಸರಳವಾದ ಟಿಪ್ಸ್ ಇದೆ ಅದನ್ನ ನಾವು ತಿಳಿಸುತ್ತೇವೆ.
- ದಿನವೂ ಖರ್ಜೂರವನ್ನ ನಿಯಮಿತ ರೂಪದಲ್ಲಿ ಸೇವಿಸುತ್ತಿದ್ದರೆ ಆಮಶಂಕೆ ಬರುವ ಸಾಧ್ಯತೆ ಇಲ್ಲ.
- ಒಂದು ಟೀ ಸ್ಪೂನಿನಷ್ಟು ಮೆಂತೆಯನ್ನ ಗಟ್ಟಿ ಮೊಸರಿನಲ್ಲಿ ಬೆರೆಸಿ ದಿನದಲ್ಲಿ ಒಂದೆರೆಡು ಸಲ ಬಾಯಿಗೆ ಹಾಕಿಕೊಳ್ಳುತ್ತಿದ್ದರೆ ಆಮಶಂಕೆಯು ನಿಲ್ಲುತ್ತದೆ.
- ಕುರಿಯ ಹಾಲಿಗೆ ಅರ್ಧ ಹೋಳು ನಿಂಬೆ ಹಣ್ಣನ್ನು ಬೆರೆಸಿ ಕುಡಿಯುವುದರಿಂದಲೂ ಆಮಶಂಕೆ ನಿವಾರಣೆಯಾಗುತ್ತದೆ.
- ಬೀಜ ಬಲಿಯದ ಪೇರಲೆ ಕಾಯಿಗಳ ಕಷಾಯವನ್ನ ಸಿದ್ದಪಡಿಸಿ ದಿನದಲ್ಲಿ ಒಂದೆರೆಡು ಬಾರಿ ಸೇವಿಸುವುದರಿಂದ ಆಮಶಂಕೆ ಮಾಯವಾಗುತ್ತದೆ.
- ಬೀಜ ತೆಗೆದ ಸೀಬೆ ಹಣ್ಣಿನ ಸಿಪ್ಪೆಯನ್ನು ಹಾಲಿಗೆ ಹಾಕಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸುತ್ತಿದ್ದರೆ ಆಮಶಂಕೆ ನಿಲ್ಲುತ್ತದೆ.
- ಮಾವಿನ ಕಾಯಿಯನ್ನ ಆಗಾಗೆ ತಿನ್ನುವುದರಿಂದಲೂ ಆಮಶಂಕೆಯನ್ನು ನಿಯಂತ್ರಿಸಬಹುದು.
- ಬಾಳೆಯ ಹಣ್ಣನ್ನು ಕೆಂಡದಲ್ಲಿ ಸುಟ್ಟು ತಿನ್ನುವುದರಿಂದಲೂ ರಕ್ತಭೇದಿಯನ್ನ ನಿಲ್ಲಿಸಬಹುದು.
- ಊಟದ ನಂತರ ಓಮಿನ ಕಾಳನ್ನು ಚೆನ್ನಾಗಿ ಜಗಿದು ತಿನ್ನುವುದರಿಂದ ಆಮಶಂಕೆ ಶೀರ್ಘವಾಗಿ ನಿವಾರಣೆ ಆಗುವುದು.
- ಕರಿಬೇವಿನ ಸೊಪ್ಪನ್ನು ಚಟ್ನಿ ಮಾಡಿ ತಿನ್ನುವುದರಿಂದಲೂ ಆಮಶಂಕೆ ದೂರಾಗುವುದು.
- ದಾಳಿಂಬೆ ಹಣ್ಣಿನ ಬೀಜವನ್ನು ನೀರಿನೊಂದಿಗೆ ಅರೆದು ಸೇವಿಸುವುದರಿಂದ ಆಮಶಂಕೆ ನಿವರಣೆ ಆಗುತ್ತದೆ.
- ಊಟದ ನಂತರ ದಿನಕ್ಕೆ ಒಂದೆರೆಡು ಸ್ಪೂನ್ ನೇರಳೆ ಹಣ್ಣಿನ ರಸ ಸೇವಿಸುವುದರಿಂದ ರಕ್ತಭೇದಿ ನಿಲ್ಲುವುದು.
- ಬಾರ್ಲಿ ಗಂಜಿಯನ್ನ ಕುಡಿಯುವುದರಿಂದಲೂ ಆಮಶಂಕೆ ನಿವಾರಣೆ ಆಗುತ್ತದೆ.
- ಕರಿಬಾಳೆ ಹಣ್ಣಿನ ಸಿಪ್ಪೆಯನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದಲೂ ಆಮಶಂಕೆಯಿಂದ ಮುಕ್ತಿ ಪಡೆಯಬಹುದು.
- ಬೀಟ್ರೋಟ್ ರಸವನ್ನ ಜೇನುತುಪ್ಪದೊಂದಿಗೆ ಸೇವಿಸಿದರೂ ಆಮಶಂಕೆ ಇಂದ ಮುಕ್ತಿ ದೊರೆಯಲಿದೆ.
ನೋಡಿದ್ರಲ್ಲ ಹೆಚ್ಚು ಖರ್ಚು ಇಲ್ಲದೆ ಆಮಶಂಕೆಯನ್ನ ಯಾವ ರೀತಿ ತಡೆಯಬಹುದು ಅಂತಾ. ನಿಮ್ಮ ನಿತ್ಯದ ಆಹಾರದ ಕ್ರಮದಲ್ಲಿ ಮೇಲಿನ ಟಿಪ್ಸ್ ಬಳಸಿದ್ರೆ ಆಮಶಂಕೆ ಇಂದ ನೀವು ದೂರ ಉಳಿಯೋದರಲ್ಲಿ ಯಾವುದೇ ಸಂದೇಹವಿಲ್ಲ.
ಪವನ್ಕುಮರ್ ಎಂ.