News Karnataka Kannada
Monday, April 29 2024
ಕ್ರೈಮ್

ಆರ್‌ಟಿಐ ಅರ್ಜಿ ಹೆಸರಿನಲ್ಲಿ ಸುಲಿಗೆ: ಪತ್ರಕರ್ತರು ಸೇರಿ ಮೂವರು ಸೆರೆ

Three persons, including journalists, arrested for extortion in the name of RTI application
Photo Credit : News Kannada

ಥಾಣೆ: ಆರ್‌ಟಿಐ ಕಾರ್ಯಕರ್ತರೆಂದು ಹೇಳಿಕೊಂಡು ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್‌ ವೊಂದನ್ನು ಪುಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಈ ಗ್ಯಾಂಗ್‌ ನಲ್ಲಿ ಪತ್ರಕರ್ತರು ಸೇರಿದ್ದಾರೆ. ಬಂಧಿತರನ್ನು ಸ್ಥಳೀಯ ಪತ್ರಿಕೆ ವರದಿಗಾರ ಸಂತೋಷ್ ಬಿ. ಹಿರೇ (44), ನಾಸಿಕ್ ಮೂಲದ ಆರ್‌ಟಿಐ ಕಾರ್ಯಕರ್ತ ಸುಭಾಷ್ ಎನ್. ಪಾಟೀಲ್ (40) ಮತ್ತು ನಾಸಿಕ್‌ನ ಪತ್ರಕರ್ತ ಶಂಶಾದ್ ಎಸ್. ಪಠಾಣ್ (48) ಎಂದು ಗುರುತಿಸಲಾಗಿದೆ.

ಈ ಗ್ಯಾಂಗ್‌ ಆರ್‌ಟಿಐ ಅರ್ಜಿ ಮೂಲಕ ಸರ್ಕಾರಿ ಅಧಿಕಾರಿಗಳನ್ನು ಬ್ಲ್ಯಾಕ್‌ ಮೇಲ್‌ ಮಾಡುತ್ತಿತ್ತು. ನಿರ್ದಿಷ್ಟ ಪ್ರಕರಣವೊಂದರಲ್ಲಿ ಸರ್ಕಾರಿ ಅಧಿಕಾರಿಯೊಬ್ಬರಿಂದ 1.50 ಲಕ್ಷ ರೂ. ಸ್ವೀಕರಿಸುತ್ತಿದ್ದ ವೇಳೆ ಮೂವರನ್ನು ರೆಡ್‌ ಹ್ಯಾಂಡ್‌ ಆಗಿ ಸೆರೆಹಿಡಿಯಾಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿವಂಡಿ, ಕಲ್ಯಾಣ್, ಉಲ್ಲಾಸನಗರ, ಬದ್ಲಾಪುರ್ ಮುಂತಾದ ಠಾಣೆಯ ವಿವಿಧ ಪಟ್ಟಣಗಳಲ್ಲಿ ಆರ್‌ಟಿಐ ಆಕ್ಟಿವಿಸಂ ಹೆಸರಿನಲ್ಲಿ ಬೆದರಿಕೆ ಮತ್ತು ಸುಲಿಗೆಯಲ್ಲಿ ಈ ಮೂವರು ತೊಡಗಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು