ಕೊಡಗು: ನಿವೃತ್ತ ಯೋಧನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಧನ ಮೃತದೇಹ ನಗರದ ಪಂಪಿನ ಕೆರೆಯಲ್ಲಿ ದೊರೆತಿದೆ. ಯೋಧ ಕಣ್ಮರೆಯಾಗಿ 30 ಗಂಟೆ ಬಳಿಕ ಪತ್ತೆಯಾದ ಮೖತದೇಹಯಾಗಿದೆ. ಬುಧವಾರ ರಾತ್ರಿ 8.20ರ ಸುಮಾರಿಗೆ ಯೋಧನ ಮೃತದೇಹ ಪತ್ತೆಯಾಗಿದ್ದು, 40 ಅಡಿ ಆಳದಲ್ಲಿ ಮೃತದೇಹ ದೊರೆತಿದೆ. ಮಲ್ಪೆಯ ಮುಳುಗು ತಜ್ಞ ಈಶ್ವರ್ ತಂಡ ಮೃತದೇಹವನ್ನು ಮೇಲಕ್ಕಿತ್ತಿದೆ.
ಹನಿಟ್ರ್ಯಾಪ್ ಜಾಲಕ್ಕೆ ಬಿದ್ದು ಮಾಜಿ ಸೈನಿಕ ಸಂದೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ತನ್ನ ಸಾವಿಗೆ ಜೀವಿತ ಮತ್ತು ಆಕೆಯನ್ನು ಬೆಂಬಲಿಸುತ್ತಿದ್ದ ಪೊಲೀಸ್ ಸತೀಶ್ ಹಾಗೂ ರೆಸಾಟ್೯ ಮಾಲೀಕ ಸತ್ಯ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನಿನ್ನೆ ಸಂಜೆ ಪಂಪಿನ ಕೆರೆಗೆ ಹಾರಿದ್ದರು ಎಂಬ ಮಾಹಿತಿಯಿದೆ. ಸಂದೇಶ್ ಪತ್ನಿ ದೂರಿನ ಆಧಾರದ ಮೇರೆಗೆ ಸದ್ಯದಲ್ಲಿಯೇ ಜಿವಿತಾ ಬಂಧನ ಮಾಡುವ ಸಾಧ್ಯತೆ ಇದೆ. ಡೆತ್ ನೋಟ್ ನಲ್ಲಿ ಸಂದೇಶ್ ಹೆಸರಿಸಿದ್ದ ಇತರ ಇಬ್ಬರ ಮೇಲೂ ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.