ಕಲಬುರಗಿ: ಹಿಂದೂ ಜಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಕಳೆದ ಡಿ.24ರಂದು ರೌಡಿ ಶೀಟ್ ತೆರೆದಿದ್ದಾರೆ.
ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುತ್ತಾರೆ, ಆದರೆ ಕೇವಲ ಒಂದೇ ಪೊಲೀಸ್ ಕೇಸ್ ಇರುವ ಹಿಂದು ಪರ ಕಾರ್ಯಕರ್ತ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಏಕಾಏಕಿ ರೌಡಶೀಟ್ ತೆರೆದಿರೋದು ಇಲ್ಲಿನ ಮಠಾಧೀಶರು, ಹಿಂದು ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಸ್ಮಸ್ ಹಬ್ಬದಂದು ಭಾಷಣ ಮಾಡಿ ಅಶಾಂತಿ ಉಂಟು ಮಾಡಬಹುದು ಎಂದು ಆರ್ಜಿ ನಗರ ಪೊಲೀಸರು ಈ ಕಾರಣ ಒಡ್ಡಿ ಡಿ.24ರಂದೇ ಲಕ್ಷ್ಮೀಕಾಂತ ಸ್ವಾಮಿ ವಿರುದ್ಧ ರೌಡಿಶೀಟ್ ಆರಂಭಿಸಿದ್ದಾರೆ.
ಲಕ್ಷ್ಮೀಕಾಂತ ಸ್ವಾಮಿ ಹಿಂದೂಪರ ಸಂಘಟನೆಯ ಪ್ರಮುಖ ಕಾರ್ಯಕರ್ತ. ಎಂದಿಗೂ ಯಾವ ಧರ್ಮದ ವಿರುದ್ಧ ಮಾತನಾಡಿ ಅಶಾಂತಿ ಉಂಟು ಮಾಡಿಲ್ಲ. ಪೊಲೀಸರು ಇದನ್ನೆಲ್ಲ ಕಲ್ಪಿಸಿಕೊಂಡು ರೌಡಿಶೀಟ್ ತೆರೆದಿರೋದು ಸರಿಯಲ್ಲವೆಂದು ಜಿಲ್ಲೆಯ ಕೇದಾರ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಪೊಲೀಸರ ಈ ಕ್ರಮವನ್ನು ಹಿಂದು ವಿರೋಧಿ ಎಂದು ಖಂಡಿಸಿದ್ದಾರೆ.
ಹಿಂದುಪರ ಕಾರ್ಯಕರ್ತನಾಗಿ ಲಕ್ಷ್ಮೀಕಾಂತ ಸ್ವಾಮಿ ಳೆದ 10 ವರ್ಷದಿಂದ ಕ್ರಿಯಾಶೀಲನಾಗಿದ್ದವ, ಪಠಾಣ ಚಿತ್ರದ ಪ್ರದರ್ಶನ ವಿರೋಧಿಸಿ ನಗರದ ಚಿತ್ರ ಮಂದಿರ ಮುಂದೆ ಧರಣಿ ನಡೆಸಿದ್ದಲ್ಲದೆ ಕಲ್ಲೆಸೆದಿದ್ದ, ಈ ಪ್ರಕರಣದಲ್ಲಿ 15 ದಿನ ಜೈಲುವಾಸ ಕೂಡಾ ಆಗಿತ್ತು. ಇದೊಂದೇ ಕೇಸ್ ಸ್ವಾಮಿ ಮೇಲೆ ಇರೋದು. ಇದೊಂದೇ ಕೇಸ್ ಇದ್ದರೂ ಕೂಡಾ ರಾಜಕೀಯವಾಗಿ ಪ್ರೇರಿತರಾಗಿ, ರೈಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ಪೊಲೀಸರು ಇವರ ವಿರುದದ್ಧ ರೌಡಿಶೀಟ್ ತೆರೆದಿರೋದು ನಾವೆಲ್ಲರೂ ಖಂಡಿಸುತ್ತೇವೆಂದು ಕೇದಾರ ಶ್ರೀಗಳು ಹೇಳಿದ್ದಾರೆ.