ತೀರ್ಥಹಳ್ಳಿ: ತುಡಕಿ ಸಮೀಪದ ತುಂಗಾ ಕಾಲೇಜಿನ ಸಮೀಪ ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ ಬಸ್ ಮತ್ತು ಶಿವಮೊಗ್ಗದತ್ತ ಸಾಗುತ್ತಿದ್ದ ಫಾರ್ಚುನರ್ ಕಾರು ನಡುವೆ ಭೀಕರ ಡಿಕ್ಕಿ ಸಂಭವಿಸಿ ಫಾರ್ಚುನರ್ ವಾಹನ ಚಾಲಕ ಪೂರ್ಣೇಶ್ ಸಾವನ್ನಪ್ಪಿದ್ದಾರೆ.
ಫಾರ್ಚುನರ್ ವಾಹನದಲ್ಲಿ ತೀರ್ಥಹಳ್ಳಿಯ ಪ್ರಸಿದ್ಧ ಅಡುಗೆ ಗುತ್ತಿಗೆದಾರ ಬಳಗಟ್ಟೆ ಶಾಂತಪ್ಪ ಮತ್ತು ಕುಟುಂಬದವರಿದ್ದರು ಎಂದು ತಿಳಿದುಬಂದಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.