News Karnataka Kannada
Friday, May 03 2024
ಕ್ರೈಮ್

ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ಕೊಲೆಯಾದ ತಾಯಿ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ಅತ್ತೆ ಕೊಲೆಯಾದ ಘಟನೆ  ನಡೆದಿದೆ.
Photo Credit : News Kannada

ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಅಳಿಯ-ಮಗಳ ಜಗಳ ಬಿಡಿಸಲು ಹೋಗಿ ತಾಯಿ ಕೊಲೆಯಾದ ಘಟನೆ  ನಡೆದಿದೆ.

ಅಶ್ವಿತ್ ಉನ್ನಿಸಾ (58) ಕೊಲೆಯಾದವರು.

ಅಶ್ವಿತ್ ಉನ್ನಿಸಾ  ತಮ್ಮ ಮಗಳನ್ನು ಕೊಡಿಗೇನಹಳ್ಳಿ ನಿವಾಸಿ ಸೈಯದ್ ಸುಹೇಲ್ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಕೌಟುಂಬಿಕ ಕಲಹದಿಂದ ಪ್ರತಿದಿನ ಅಳಿಯ ಮಗಳು ಜಗಳ ಮಾಡಿಕೊಳ್ಳುತ್ತಿದ್ದರು.

ಅಂತೆಯೇ ಮೊನ್ನೆಯ ದಿನ ಜಗಳ ಮಾಡಿಕೊಂಡಿದ್ದು ಜಗಳ ವಿಕೋಪಕ್ಕೆ ತಿರುಗಿತ್ತು. ಹೀಗಾಗಿ ಅಮ್ಮನನ್ನು ಮಗಳು ಫೋನ್ ಮಾಡಿ ಗಂಡನ ಮನೆಗೆ ಕರೆಸಿಕೊಂಡಿದ್ದಳು. ಅಳಿಯ-ಮಗಳ ಜಗಳ ಬಿಡಿಸಲು ಹೋದ ವೇಳೆ ಅಶ್ವಿತ್ ಉನ್ನಿಸಾ ತಲೆಗೆ ಅಳಿಯ ದೊಣ್ಣೆಯಿಂದ ಹೊಡೆದಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಶ್ವಿತ್ ಉನ್ನಿಸಾಳನ್ನ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು