ಮೀರತ್: ಹಳಿ ದಾಟುತ್ತಿದ್ದಾಗ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು 40 ವರ್ಷದ ಮಹಿಳೆ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸಾವನ್ನಪ್ಪಿರುವ ಘಟನೆ ಭಾನುವಾರ ಉತ್ತರಪ್ರದೇಶದ ಮೀರತ್ ಬಳಿ ನಡೆದಿದೆ. ಕಾಸಂಪುರ್ ಮಾನವಸಹಿತ ಲೆವೆಲ್ ಕ್ರಾಸಿಂಗ್ನ ಗೇಟ್ಗಳನ್ನು ಮುಚ್ಚಿದಾಗ ಅಪಘಾತ ಸಂಭವಿಸಿದೆ.
ಮೃತರನ್ನು ತಾಯಿ ಮೋನಾ (40), ಪುತ್ರಿಯರಾದ ಮನೀಶಾ (14) ಮತ್ತು ಚಾರು (7) ಎಂದು ಗುರುತಿಸಲಾಗಿದೆ. ತಂದೆ ನರೇಶ್ ಕಾಸಂಪುರದ ಮಾನವಸಹಿತ ರೈಲ್ವೇ ಕ್ರಾಸಿಂಗ್ನಲ್ಲಿ ರೈಲ್ವೇ ಗೇಟ್ ಕೆಳಗೆ ಚಲಿಸಿ ರೈಲು ಹಳಿ ದಾಟಿದರೆ, ಇತ್ತ ಪತ್ನಿ, ಮಕ್ಕಳು ರೈಲಿಗೆ ಬಲಿಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪಿಯೂಷ್ ಕುಮಾರ್ ಸಿಂಗ್ ಹೇಳಿದ್ದಾರೆ.