News Karnataka Kannada
Monday, April 29 2024
ಕ್ರೈಮ್

ಮಣಿಪುರ ಅಶಾಂತಿ: ಮತ್ತೆ ಇಬ್ಬರು ಬಾಲಕರ ಅಪಹರಣ

Manipur unrest: Two more boys kidnapped
Photo Credit : News Kannada

ಇಂಫಾಲ: ಮಣಿಪುರದ ಪಶ್ಚಿಮ ಇಂಫಾಲ್ ನಲ್ಲಿ ಭಾನುವಾರ ಇಬ್ಬರು ಹದಿಹರೆಯದ ಬಾಲಕರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಪಡೆಗಳು ಇಬ್ಬರು ಶಂಕಿತರನ್ನು ಬುಧವಾರ ಬಂಧಿಸಿದ್ದಾರೆ.

ಈ ನಡುವೆ ಇಂಫಾಲ್‌ನಲ್ಲಿ ಉದ್ವಿಗ್ನತೆ ಹೆಚ್ಚಿದೆ. ಅವಾಂಗ್‌ನ ಅಖಂ ಲೈಕಾದಿಂದ ಅವಿನಾಶ್ ಮೈಬಮ್ ಮತ್ತು ನಿಂಗ್‌ತೌಜಮ್ ಆಂಥೋನಿ ಅಪಹರಣಕ್ಕೆ ಸಂಬಂಧಿಸಿ ಇಬ್ಬರು ಶಂಕಿತರಾದ ಲುಂಕೋಸೆಯ್ ಚೊಂಗ್ಲೋಯ್ ಮತ್ತು ಸತ್‌ಗೊಹ್ಗಿನ್ ಹ್ಯಾಂಗ್‌ಸಿನ್ಹ್, ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರು ಉಗ್ರಗಾಮಿ ಸಂಘಟನೆಯ ಕಾರ್ಯಕರ್ತರು ಎಂದು ಪೊಲೀಸರು ಶಂಕಿಸಿದ್ದಾರೆ. ಇಬ್ಬರು ಬಾಲಕರು ಭಾನುವಾರ ಬೆಳಗ್ಗೆ ದ್ವಿಚಕ್ರ ವಾಹನದಲ್ಲಿ ಸೆಕ್ಮಾಯಿ ಕಡೆಗೆ ಹೋಗಿದ್ದು ಮನೆಗೆ ವಾಪಸ್ ಬಂದಿರಲಿಲ್ಲ. ಅವರ ಕುಟುಂಬಸ್ಥರು ಬಾಲಕರನ್ನು ಫೋನ್‌ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗದ ಕಾರಣ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ನಡುವೆ ಬಿಜೆಪಿ ಶಾಸಕ ಎಸ್. ರಾಜೇನ್ ಸಿಂಗ್ ಮಣಿಪುರದ ರಾಜ್ಯಪಾಲ ಅನುಸೂಯಾ ಉಯಿಕೆ ಅವರನ್ನು ಭೇಟಿಯಾಗಿ ಇಬ್ಬರು ಬಾಲಕರ ನಾಪತ್ತೆ ಬಗ್ಗೆ ಚರ್ಚಿಸಿದರು. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಸಲ್ಲಿಸಿದರು. ಯುವಕರ ಪತ್ತೆಗಾಗಿ ಪೊಲೀಸರು, ಅಸ್ಸಾಂ ರೈಫಲ್ಸ್ ಮತ್ತು ಸಿಆರ್‌ಪಿಎಫ್‌ನ ಸಂಯೋಜಿತ ಪಡೆಗಳು ಕಾಂಗ್‌ಪೊಕ್ಪಿ ಜಿಲ್ಲೆಯ ಖೇಂಗ್‌ಜಾಂಗ್, ಲ್ಯಾಂಗ್ನೋಮ್ ಮತ್ತು ಗಂಪಿಫೈನಲ್ಲಿ ಶೋಧ ನಡೆಸುತ್ತಿವೆ. ಅದೇ ರೀತಿ ಸೇನಾಪತಿ ಜಿಲ್ಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ಯುವಕರು ಬಳಸುತ್ತಿದ್ದ ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು