ಹುಬ್ಬಳ್ಳಿ: ಕರೆಂಟ್ ಬಿಲ್ ಕೊಡಲು ಹೋದ ಹೆಸ್ಕಾಂ ನೌಕರನ ಮೇಲೆ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕರೆಂಟ್ ಬಿಲ್ ಜಾಸ್ತಿ ಬಂದದಕ್ಕೆ ನೌಕರನ ಮೇಲೆ ಯುವಕನೊಬ್ಬ ಸಿಟ್ಟು ತೀರಿಸಿಕೊಂಡ ಘಟನೆ ಹುಬ್ಬಳ್ಳಿಯ ಮಹಾಲಕ್ಷ್ಮಿ ಬಡವಾವಣೆಯಲ್ಲಿ ನಡೆದಿದೆ.
ಮಲ್ಲಯ್ಯ ಗಣಾಚಾರಿ ಹಲ್ಲೆಗೊಳಗಾದ ಹೆಸ್ಕಾಂ ಮೀಟರ್ ರೀಡರ್. ಅಬ್ದುಲ್ ಕಲಾಯಿಗಾರ ಹಲ್ಲೆ ಮಾಡಿದ್ದು, ಆರೋಪಿ ಅಬ್ದುಲ್ ಹೆಸ್ಕಾಂ ಗ್ರಾಹಕರಾಗಿದ್ದು ಕಳೆದ ಎರಡು ಮೂರು ತಿಂಗಳ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದರು. ಹೀಗಾಗಿ ಈ ತಿಂಗಳ ಬಿಲ್ 5 ಸಾವಿರಕ್ಕಿಂತ ಜಾಸ್ತಿ ಬಂದಿದೆ. ಅಬ್ದುಲ್ ವಿದ್ಯುತ್ ಬಳಕೆ 200 ಯೂನಿಟ್ ಜಾಸ್ತಿ ಇರುವ ಹಿನ್ನೆಲೆ ಗೃಹ ಜ್ಯೋತಿ ಯೋಜನೆ ಸಹ ಕ್ಯಾನ್ಸಲ್ ಆಗಿದೆ. ಇದರಿಂದ ಕೋಪಗೊಂಡಿದ್ದ ಅಬ್ದುಲ್ ಕರೆಂಟ್ ಬಿಲ್ ನೀಡಲು ಹೋದ ಮಲ್ಲಯ್ಯ ನ ಮೇಲೆ ಹಲ್ಲೆ ನಡೆಸಿದ್ದಾನೆ.
ಇನ್ನೂ ಮೀಟರ್ ರೀಡರ್ ಗೆ ಇಟ್ಟಿಗೆಯಿಂದ ಬಲವಾಗಿ ತಲೆಗೆ ಹೊಡೆದು, ಮನಬಂದಂತೆ ಥಳಿಸಿದ್ದಾನೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.