ಮಂಗಳೂರು: ಉಡುಪಿಯ ನೇಜಾರಿನಲ್ಲಿ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೌಗುಲೆಯನ್ನು ಉಡುಪಿ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ.
ಆರೋಪಿ ಅರುಣ್ ಚೌಗುಲೆ ಈ ಹಿಂದೆ ವಾಸವಿದ್ದ ಪದವಿನಂಗಡಿ ಮನೆಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಚಾಕು ಗಾಗಿ ಪೊಲೀಸರ ತೀವ್ರ ಶೋಧ ನಡೆಸಿದ್ದಾರೆ. ಆರೋಪಿ ವಾಸವಿದ್ದ ಮನೆಯಲ್ಲಿ ಪೊಲೀಸರಿಂದ ಮಹಜರು ಪ್ರಕ್ರಿಕ್ರಿಯೆ ನಡೆಯುತ್ತಿದೆ. ಉಡುಪಿ ತನಿಖಾಧಿಕಾರಿ, ವಿಧಿ ವಿಜ್ಞಾನ ಪ್ರಯೋಗಲಯದ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ.