News Karnataka Kannada
Wednesday, May 01 2024
ಕ್ರೈಮ್

ನಕಲಿ ನೋಟ್ ಪ್ರಕರಣ: ಬಳ್ಳಾರಿ ಯುವಕನನ್ನು ಬಂಧಿಸಿದ ಎನ್‍ಐಎ

Bangla to Bengaluru illegal migration: NIA arrests man in Kerala
Photo Credit : News Kannada

ಬಳ್ಳಾರಿ: ನಕಲಿ ನೋಟ್ ಮುದ್ರಣ ಮತ್ತು ಚಲಾವಣೆ ಪ್ರಕರಣದಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಯುವಕ ಸೇರಿದಂತೆ ವಿವಿಧ ರಾಜ್ಯದ ನಾಲ್ವರನ್ನು ಎನ್‍ಐಎ ತಂಡ  ಬಂಧಿಸಿದೆ.

ಬಂಧಿಸಲಾದ ಬಳ್ಳಾರಿಯ ಆರೋಪಿಯನ್ನು ಗೌತಮ ನಗರದ ಮಹೇಂದ್ರ (19) ಎಂದು ಗುರುತಿಸಲಾಗಿದೆ.

ಅಲ್ಲದೆ ಉಳಿದ ನಾಲ್ವರನ್ನು,  ಉತ್ತರ ಪ್ರದೇಶದ ಮೂಲದ ಕಿಂಗ್‍ಪಿನ್‍ಗಳಾದ ರಾಹುಲ್ ತಾನಜಿ ಪಾಟೀಲ್, ಮಹಾರಾಷ್ಟ್ರದ ಶಿವು ಪಾಟೀಲ್, ವಿವೇಕ್ ಠಾಕೂರ್, ಬಿಹಾರದ ಶಶಿಭೂಷಣ್ ಎಂಬ ನಾಲ್ವರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಬಳ್ಳಾರಿ ಯುವಕ ಒಮ್ಮೆಯೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಿಗೆ ಹೋಗಿಲ್ಲ ಎನ್ನಲಾಗಿದೆ. ಆತನಿಗೆ ಪ್ರಮುಖ ಆರೋಪಿಗಳ ಪರಿಚಯ ಹೇಗೆ ಆಗಿದೆ ಎಂಬುದು ಇನ್ನೂತಿಳಿದು ಬಂದಿಲ್ಲ.

ಆರೋಪಿ ಮಹೇಂದ್ರನ ಮನೆಯಲ್ಲಿ 500 ರೂ. ಮುಖಬೆಲೆಯ ಅಚ್ಚಿನ ಮಾದರಿ ಮತ್ತು ಒಂದು ಮುದ್ರಣ ಯಂತ್ರವನ್ನು ಸೀಜ್ ಮಾಡಲಾಗಿದೆ. ಮಹೇಂದ್ರ ಕಳೆದ ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ. ಯುವಕನ ಮನೆ ಪರಿಸ್ಥಿತಿ ಹಾಗೂ ಅಲ್ಲಿನ ವಾತಾವರಣ ನೋಡಿದರೆ ಯುವಕನಿಗೆ ಇಷ್ಟೊಂದು ದೊಡ್ಡ ಮಟ್ಟದ ಕಾಂಟ್ಯಾಕ್ಟ್ ಹೇಗೆ ಎಂಬುದು ಹಲವು ಶಂಕೆಗಳಿಗೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು