ಬೆಂಗಳೂರು: ದೊಡ್ಡಬಾಣಸವಾಡಿ ಕಾಲೋನಿಯಲ್ಲಿ ಸೋದರ ಮಾವ ಅಕ್ಕನ ಮಗನನ್ನು ಹತ್ಯೆ ಮಾಡಿದ ಘಟನೆ ನಡೆದಿದೆ.
ಚಾಕು ಇರಿತಕ್ಕೆ ಅಜಯ್ (35) ಮೃತಪಟ್ಟಿದ್ದಾನೆ. ಮೃತ ಯುವಕ ಕುಡಿತದ ಚಟಕ್ಕೆ ದಾಸನಾಗಿದ್ದನು. ಪ್ರತಿನಿತ್ಯ ಅಜ್ಜ-ಅಜ್ಜಿಗೆ ಹಣಕ್ಕಾಗಿ ಪೀಡಿಸಿ ನಿಂದಿಸುತ್ತಿದ್ದನು. ಇದೇ ವಿಚಾರಕ್ಕೆ ಮೃತ ಅಜಯ್ ಹಾಗೂ ಆರೋಪಿ ಮುರಳಿಗೆ ಜಗಳವಾಗಿತ್ತು. ಕೊನೆಗೆ ಮಾತಿಗೆ ಮಾತು ಬೆಳೆದು ಮುರಳಿ ಚಾಕು ಇರಿದು ಅಜಯ್ನನ್ನು ಹತ್ಯೆ ಮಾಡಿದ್ದಾನೆ.
ಸದ್ಯ ಆರೋಪಿಯನ್ನು ಬಾಣಸವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.