ಮನೆಯಲ್ಲಿಯೇ ರುಚಿಕರವಾದ ಪುಳಿಯೋಗರೆ ಮಾಡುವ ವಿಧಾನ

ಪುಳಿಯೋಗರೆ ಮಾಡಲು ಬೇಕಾಗುವ ಸಾಮಾಗ್ರಿಗಳು

100 ಗ್ರಾಂ ಹುಣಸೆಹಣ್ಣು
ಸ್ವಲ್ಪ ಬೆಲ್ಲ
6 ಚಮಚ ಕರಿ ಎಳ್ಳು
ಅರ್ಧ ಕೊಬ್ಬರಿ
ಒಂದು ಚಮಚ ಮೆಂತ್ಯೆ
2 ಚಮಚ ಕರಿ ಮೆಣಸು
ಮೂರು ಚಮಚ ಕೊತ್ತಂಬರಿ ಬೀಜ
2 ಚಮಚ ಜೀರಿಗೆ
5 ರಿಂದ 6 ಒಣಮೆಣಸು ಮೆಣಸು
4 ರಿಂದ 5 ಗುಂಟೂರು ಮೆಣಸಿನಕಾಯಿ
ಅಗತ್ಯಕ್ಕೆ ತಕ್ಕಷ್ಟು ಎಣ್ಣೆ
2 ಚಮಚ ಉದ್ದಿನಬೇಳೆ
1 ಚಮಚ ಸಾಸಿವೆ
2 ಚಮಚ ಕಡಲೇ ಬೇಳೆ
2 ಚಮಚ ಶೇಂಗಾ
ಸ್ವಲ್ಪ ಇಂಗು
ಸ್ವಲ್ಪ ಕರಿಬೇವು
ಅನ್ನ

ಪುಳಿಯೋಗರೆ ಮಾಡುವ ವಿಧಾನ

100 ಗ್ರಾಂ ಹುಣಿಸೆಹಣ್ಣನ್ನು ನೆನೆಸಿಟ್ಟು ಅದರ ರಸಹಿಂಡಿಕೊಂಡು ಇಟ್ಟುಕೊಳ್ಳಿ, ಅದಕ್ಕೆ ನಿಂಬೆಹಣ್ಣಿನ ಗಾತ್ರದಷ್ಟು ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಈಗ ಆರು ಚಮಚ ಕರಿ ಎಳ್ಳನ್ನು ಹುರಿದುಕೊಂಡು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ನಂತರ ಅರ್ಧ ಒಣ ಕೊಬ್ಬರಿಯನ್ನು ತುರಿದು ಅದಕ್ಕೆ ಸೇರಿಸಿ ಮಿಶ್ರಣ ಮಾಡಿ.

ಈಗ ಒಂದು ಪ್ಯಾನ್​ ತೆಗೆದುಕೊಂಡು ಒಂದು ಚಮಚ ಮೆಂತ್ಯ, ಎರಡು ಚಮಚ ಕರಿ ಮೆಣಸು, ಮೂರು ಚಮಚ ಕೊತ್ತಂಬರಿ ಬೀಜ, ಎರಡು ಚಮಚ ಜೀರಿಗೆ, 5-6 ಬಳ್ಳಿ ಒಣಮೆಣಸಿನಕಾಯಿ, 4-5 ಗುಂಟೂರು ಮೆಣಸಿನಕಾಯಿ ಇವಿಷ್ಟನ್ನೂ ಎರಡರಿಂದ ಮೂರು ಚಮಚ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಗರಿಗರಿ ಹುರಿದುಕೊಂಡು ತಣ್ಣಗಾದ ಮೇಲೆ ಮಿಕ್ಸಿಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಬೇಕು.

ಈಗ ಒಗ್ಗರಣೆ ಮಾಡಿಕೊಳ್ಳಿ, ಅದಕ್ಕೆ ಒಂದು ಪ್ಯಾನ್​ನಲ್ಲಿ ಸ್ವಲ್ಪ ಎಣ್ಣೆ, ಒಂದು ಚಮಚ ಸಾಸಿವೆ, ಎರಡು ಚಮಚ ಉದ್ದಿನಬೇಳೆ, ಎರಡು ಚಮಚ ಕಡಲೆಬೇಳೆ, 50 ಗ್ರಾಂ ಶೇಂಗಾ ಜೊತೆಗೆ ಕರಿಬೇವಿನ ಎಲೆಗಳು ಮತ್ತು ಅರ್ಧ ಚಮಚ ಇಂಗು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇವೆಲ್ಲ ರೆಡಿ ಆದ ಮೇಲೆ ತಯಾರಿಸಿಕೊಂಡಿರುವ ಅನ್ನಕ್ಕೆ ಹಾಕಿ ಚನ್ನಾಗಿ ಕಲಸಿದರೆ ರುಚಿ ರುಚಿಯಾದ ಅಯ್ಯಂಗಾರ್ ಪುಳಿಯೋಗರೆ ರೆಡಿ.

Sneha Gowda

Recent Posts

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

9 mins ago

ಆರ್​ಸಿಬಿ ಮುಂದಿನ ಪಂದ್ಯವನ್ನು ಯಾವ ತಂಡದ ಜೊತೆ ಆಡಲಿದೆ..?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್​ಗೆ ಪ್ರವೇಶಿಸಿದೆ. ಇನ್ನು ಆರ್​ಸಿಬಿ…

23 mins ago

ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ

ನಗರದ ಮಂಗಲಪೇಟ್‌ ಸಮೀಪದ ಮೆಥೋಡಿಸ್ಟ್‌ ಚರ್ಚ್‌ನ 101ನೇ ವಾರ್ಷಿಕ ಜಾತ್ರೆ ಉತ್ಸವ ಸಂಭ್ರಮದಿಂದ ನಡೆಯಿತು.

47 mins ago

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

59 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

1 hour ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

1 hour ago