ಮಾಂಸ ಆಹಾರದ ಪಟ್ಟಿಯಲ್ಲಿ ಚಿಕನ್ ಬಿರಿಯಾನಿ ಯಾವಾಗಲೂ ಮುಂಚೂಣಿಯಲ್ಲಿರುವ ಖಾದ್ಯ. ಬಿರಿಯಾನಿ ತಿನ್ನಲು ತುಂಬಾ ರುಚಿಕರವಾಗಿದ್ದು ಅಷ್ಟೇ ದುಬಾರಿ ಕೂಡ ಹೌದು. ಜೇಬಲ್ಲಿ ದುಡ್ಡಿದ್ದವರೂ ಮಾತ್ರ ವಾರಕ್ಕೆ ಒಂದು ಭಾರಿಯಾದರೂ ಸವಿಯಬಹುದು. ಅಂತವರಿಗೆ ನಗರದಲ್ಲಿರುವ ಕ್ಯಾಂಟೀನ್ ವೊಂದರಲ್ಲಿ ಪ್ರತೀ ಶನಿವಾರ ತುಂಬಾ ಕಡಿಮೆ ದರದಲ್ಲಿ ಹೊಟ್ಟೆ ತುಂಬಾ ಬಿರಿಯಾನಿಯನ್ನು ಸವಿಯಬಹುದು.
ನಗರದ ಗೋರಿಗುಡ್ಡದಲ್ಲಿರುವ ಗುರುಪ್ರಸಾದ್ ಸಸ್ಯಹಾರಿ ಹಾಗೂ ಮಾಂಸಾಹಾರಿ ಕ್ಯಾಂಟೀನ್ ವೊಂದರಲ್ಲಿ ಬಿರಿಯಾನಿ ಪ್ರಿಯರನ್ನು ತೃಪ್ತಿ ಪಡಿಸುವ ನಿಟ್ಟಿನಲ್ಲಿ ಕ್ಯಾಂಟೀನ್ ಮಾಲೀಕರಾದ ಎಂ.ಕೃಷ್ಣ ಅವರು 23 ವರ್ಷಗಳಿಂದ ಪ್ರತಿ ಶನಿವಾರ ಹಾಫ್ ಬಿರಿಯಾನಿಯನ್ನು ₹ 40 ಹಾಗೂ ಫುಲ್ ಬಿರಿಯಾನಿಯನ್ನು 80 ರೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.
25 ವರ್ಷಗಳ ಹಿಂದೆ ಅಡುಗೆ ತಯಾರಿ ಕೆಲಸ ಮಾಡುತ್ತಿದ್ದ ಎಂ. ಕೃಷ್ಣ ಅವರು ತನ್ನ ಸ್ನೇಹಿತರ ಬಳಗದ ಒತ್ತಡಕ್ಕೆ ಮಣಿದು ನಗರದ ಪಂಪ್ ವೆಲ್ ನ ಗೋರಿಗುಡ್ಡದಲ್ಲಿ ಕ್ಯಾಂಟೀನ್ ನೊಂದನ್ನು ಆರಂಭಿಸುತ್ತಾರೆ. 1995ರಲ್ಲಿ ಬಿರಿಯಾನಿ ತುಂಬಾ ಅಪರೂಪವಾದ ಖಾದ್ಯವಾಗಿದ್ದರಿಂದ ತನ್ನ ಗ್ರಾಹಕರಿಗೆ ಅಪರೂಪಕ್ಕೆ ಒಮ್ಮೆಯಾದರೂ ಖುಷಿ ಕೊಡಬೇಕೆಂಬ ದೃಷ್ಟಿಯಿಂದ ಶನಿವಾರ ಬಿರಿಯಾನಿ ವಿಶೇಷ ಖಾದ್ಯವನ್ನು ಆರಂಭಿಸುತ್ತಾರೆ. ಅಂದಿನಿಂದ ಗ್ರಾಹಕರು ನಮ್ಮಲ್ಲಿ ತಯಾರಾದ ಬಿರಿಯಾನಿಯನ್ನು ಇಷ್ಟ ಪಟ್ಟು ಸವಿಯುತ್ತಿದ್ದರು. ಇಲ್ಲಿ ಜನಸಾಮಾನ್ಯರು, ಕೂಲಿ ಕಾರ್ಮಿಕರು ಹೆಚ್ಚು ಬರುತ್ತುರುವುದರಿಂದ ಅವರನ್ನು ತೃಪ್ತಿ ಪಡಿಸುವುದಕ್ಕಾಗಿ ಪ್ರತಿ ಶನಿವಾರ ಹಾಫ್ ಬಿರಿಯಾನಿಗೆ 40ರೂ ಹಾಗೂ ಫುಲ್ ಬಿರಿಯಾನಿಗೆ 80 ರೂಪಾಯಿ ನಿಗದಿ ಮಾಡಿದ್ದೇವು. ಅಂದಿನಿಂದಲೂ ಶನಿವಾರ ಮಧ್ಯಾಹ್ನ 12ಕ್ಕೆ ಬಿರಿಯಾನಿಗಾಗಿ ತುಂಬಾ ಜನ ಸರಥಿ ಸಾಲಿನಲ್ಲಿ ನಿಲ್ಲುತ್ತಾರೆ ಎನ್ನುತ್ತಾರೆ ಮಾಲೀಕ ಕೃಷ್ಣ.
ಅದಲ್ಲದೆ ಬಿರಿಯಾನಿ ತಯಾರಿಸುವ ಗುಣಮಟ್ಟದಲ್ಲಿಯೂ ಯಾವುದೇ ರಾಜಿ ಮಾಡಿಕೊಳ್ಳದ ಇವರು, ಒಮ್ಮೇ ಇಲ್ಲಿನ ಬಿರಿಯಾನಿ ರುಚಿ ನೋಡಿದರೆ ಮುಂದಿನ ಶನಿವಾರವೂ ನೀವು ಹಾಜರಾಗುತ್ತೀರಿ.
ಅದಲ್ಲದೆ ಈ ಕ್ಯಾಂಟೀನ್ ನಲ್ಲಿ ಪ್ರತಿ ಸೋಮವಾರ ಊಟಕ್ಕೆ ಬರುವ ಗ್ರಾಹಕರಿಗೆ ಒಂದು ಚಮಚ ಪಾಯಸವನ್ನು ಉಚಿತವಾಗಿ ಬಡಿಸಲಾಗುತ್ತದೆ.
ಪ್ರತಿವರ್ಷದಂತೆ ಈ ಬಾರಿಯೂ ಮೈಸೂರು ನಗರದಲ್ಲಿ ಒಂದೇ ಸೂರಿನಡಿ ವಿವಿಧ ಮಾವಿನ ತಳಿಯ ಹಣ್ಣು, ಹಲಸಿನ ಹಣ್ಣಿನ ರುಚಿ ಸವಿಯಲು…
ಜಿಪ್ ಲೈನ್ ತುಂಡಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಜಂಗಲ್ ಟ್ರಯಲ್ಸ್ ರೆಸಾರ್ಟ್ನಲ್ಲಿ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಎಂಬಲ್ಲಿ…
ಇಂದು ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ಗೆದ್ದು…
ವೈದ್ಯರು ಮಹಿಳೆಯೊಬ್ಬರ ಮೂತ್ರಪಿಂಡದಿಂದ 300 ಕ್ಕೂ ಹೆಚ್ಚು ಕಲ್ಲುಗಳನ್ನು ತೆಗೆದುಹಾಕಿದ್ದಾರೆ. ದೇಹದಲ್ಲಿ ನೀರಿನಾಂಶ ಕಡಿಮೆಯಾಗದಿರಲು ನೀರಿನ ಬದಲು ಪ್ರತೀ ದಿನ…
ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ದಾಖಲಾಗಿದೆ.ಶಾಸಕರು ತನ್ನ…