ವಿಶ್ವ ತಾಯಂದಿರ ದಿನಾಚರಣೆ ಅಂಗವಾಗಿ. ರಾಷ್ಟ ಪ್ರಶಸ್ತಿ ವಿಜೇತ ನಟಿ ಹಾಗೂ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಅವರು ತಾಯಿ ಪುಷ್ಪಾ ಟಿ ಅವರ ಪುಣ್ಯ ತಿಥಿಯನ್ನು ಬಡ ಮತ್ತು ಅನಾಥ ಮಹಿಳೆಯರಿಗೆ ಬಟ್ಟೆ ಹಾಗೂ ಆಹಾರ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ.
ಭಾರತಿನಗರ ನಾಗರಿಕರ ವೇದಿಕೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನಟಿ ತಾರಾ ಅನುರಾಧ ಅವರು ತಾಯಿ ಪುಷ್ಷಾ ಟಿ ಅವರ ಸವಿ ನೆನಪಿಗಾಗಿ ಬಡ ಹಾಗೂ ಅನಾಥ ಮಹಿಳೆಯರಿಗೆ ಬಟ್ಟೆ ಹಾಗೂ ಆಹಾರ ವಿತರಿಸಿದರು.
photo credit : G.Mohan photojournalist, Bengaluru