News Karnataka Kannada
Tuesday, April 30 2024
ಮನರಂಜನೆ

ಖ್ಯಾತ ಕಿರುತೆರೆ ನಟ ಹೃದಯಾಘಾತದಿಂದ ಸಾವು !

Died (3)
Photo Credit : News Kannada

ಮುಂಬೈ: ಖ್ಯಾತ ಕಿರುತೆರೆ ನಟ ರಿತುರಾಜ್ ಸಿಂಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ರಿತುರಾಜ್ ಸಿಂಗ್ ಅವರ ಆಪ್ತ ಸ್ನೇಹಿತ ಮತ್ತು ನಟ ಅಮಿತ್ ಬೆಹ್ಲ್ ಅವರ ಸಾವನ್ನು ಖಚಿತಪಡಿಸಿದ್ದಾರೆ.

ವರದಿ ಪ್ರಕಾರ, ರಿತುರಾಜ್ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಟ ಹೃದಯಾಘಾತದಿಂದ ನಿಧನರಾದರು. ಅವರು ಮೇದೋಜ್ಜೀರಕ ಗ್ರಂಥಿಯ ಚಿಕಿತ್ಸೆಗಾಗಿ ಕೆಲವು ಸಮಯದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಗೆ ಮರಳಿದರು. ಆದರೆ ಕೆಲವು ಹೃದಯದ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅದರಿಂದ ಅವರು ನಿಧನರಾಗಿದ್ದಾರೆಂದು ತಿಳಿದುಬಂದಿದೆ. ಇನ್ನು ಇವರು ಬಾಲಿವುಡ್ ಸಿನಿಮಾಗಳಾದ ಬದರಿನಾಥ್ ಕಿ ದುಲ್ಹನಿಯಾ (2017), ವಾಶ್-ಪಾಸೆಸ್ಡ್ ಬೈ ದಿ ಒಬ್ಸೆಸ್ಡ್, ಮತ್ತು ಥುನಿವು (2023) ನಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಯಾರಿಯನ್ 2 ಅವರ ಕೊನೆಯ ಮೂವಿಯಾಗಿತ್ತು.

ರಿತುರಾಜ್ ದಿ ಟೆಸ್ಟ್ ಕೇಸ್, ಹೇ ಪ್ರಭು, ಕ್ರಿಮಿನಲ್, ಅಭಯ್, ಬಂದಿಶ್ ಬ್ಯಾಂಡಿಟ್ಸ್, ನೆವರ್ ಕಿಸ್ ಯುವರ್ ಬೆಸ್ಟ್ ಫ್ರೆಂಡ್ ಮತ್ತು ಮೇಡ್ ಇನ್ ಹೆವನ್ ಸೀಸನ್ 2 ಸೇರಿದಂತೆ ಹಲವಾರು ವೆಬ್ ಸೀರೀಸ್‌ನಲ್ಲಿಯೂ ನಟಿಸಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು