ಮುಂಬಯಿ: 2018ರಲ್ಲಿ ಬಂದಿದ್ದ ಹಾರಾರ್ ‘ತುಂಬಾಡ್ʼ ಸಿನಿಮಾ ಸೆ.13 ರಂದು ರೀ- ರಿಲೀಸ್‌ ಆಗಿದೆ. ಸಿನಿಮಾದ ಟಿಕೆಟ್‌ ಖರೀದಿಗಾಗಿ ಜನ ಮುಗಿಬಿದ್ದಿದ್ದಾರೆ. ಯಾವ ದೊಡ್ಡ ಕಲಾವಿದರು, ಸ್ಟಾರ್‌ ಕಾಸ್ಟ್‌ ಇಲ್ಲದೆಯೇ ರಿಲೀಸ್‌ ಆದ ‘ತುಂಬಾಡ್ʼ ತನ್ನ ಕಥೆ ಹಾಗೂ ಅಮೋಘ ದೃಶ್ಯಾವಳಿಯಿಂದ ಪ್ರೇಕ್ಷಕರ ಮನಗೆದ್ದಿತ್ತು. ನಿಧಾನವಾಗಿ ಥಿಯೇಟರ್ ನತ್ತ ಜನ ಬರುವಾಗಲೇ ಸಿನಿಮಾ ಮಾಯಾವಾಗಿತ್ತು. ಆದರೆ ಸಿನಿಮಾದ ಬಗ್ಗೆ ಅನೇಕರು ಪಾಸಿಟಿವ್‌ ಆಗಿ ಮಾತನಾಡಿದ್ದರು.

ಬಂಗಾರದ ನಾಣ್ಯಕ್ಕಾಗಿ ಜೀವ ಪಣಕ್ಕಿಟ್ಟು ಸಾಹಸಕ್ಕೆ ಹೊರಡುವ ಹಾರಾರ್‌ – ಥ್ರಿಲ್ಲರ್‌ ‘ತುಂಬಾಡ್ʼ ಸಿನಿಮಾದ ತಯಾರಿಗೆ 6 ವರ್ಷ ಬೇಕಾಗಿತ್ತು. ಮಹಾರಾಷ್ಟ್ರದ ಹೊರವಲಯದಲ್ಲಿ ಚಿತ್ರೀಕರಣಗೊಂಡ ಸಿನಿಮಾ ನೈಜ ಘಟನೆಯಂತೆ ಮೂಡಿಬಂದಿದೆ. ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹಾಕಿದ ಹಣವನ್ನೂ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಆ ವರ್ಷ ಆಸ್ಕರ್‌ ಗಾಗಿ ಭಾರತದಿಂದ ‘ತುಂಬಾಡ್ʼ ಸಿನಿಮಾವನ್ನು ಕಳುಹಿಸಬೇಕೆನ್ನುವ ಕೂಗು ಕೇಳಿ ಬಂದಿತ್ತು.