ಮುಂಬೈ: ನಟಿ ಕಂಗನಾ ರನೌತ್ ಇತ್ತೀಚೆಗೆ ತನ್ನ ಟ್ವಿಟ್ಟರ್ನಲ್ಲಿ ದೇವಸ್ಥಾನದೊಳಗೆ ಕನಿಷ್ಢ ಉಡುಗೆ ತೊಟ್ಟು ದೇವಳ ಪ್ರವೇಶಿಸಿದ ಯುವತಿ ಯರಿಗೆ ನೈತಿಕತೆಯ ಪಾಠ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಕಂಗ್ರಾದಲ್ಲಿರುವ ಬೈಜನಾಥ ದೇವಸ್ಥಾನಕ್ಕೆ ಚಿಕ್ಕ ಬಟ್ಟೆಗಳನ್ನು ಧರಿಸಿ ಬಂದಿದ್ದ ಯುವತಿಯರ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲಿ ಕ್ರಾಪ್ ಟಾಪ್ ಮತ್ತು ಶಾರ್ಟ್ಸ್ನಲ್ಲಿ ಓರ್ವ ಯುವತಿ ಇದ್ದು, ಇನ್ನೊಬ್ಬರು ಜೀನ್ಸ್ನಲ್ಲಿ ಶಾಲು ಹೊದಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಅವರು ಹಿಂದಿಯಲ್ಲಿ ಹೀಗೆ ಟ್ವೀಟ್ ಮಾಡಿದ್ದಾರೆ: “ಇದು ಹಿಮಾಚಲದ ಪ್ರಸಿದ್ಧ ಶಿವ ದೇವಾಲಯವಾದ ಬೈಜನಾಥ್ನ ದೃಶ್ಯವಾಗಿದೆ. ಅವರು ಪಬ್ ಅಥವಾ ನೈಟ್ಕ್ಲಬ್ಗೆ ಹೋದಂತೆ ಬೈಜನಾಥ್ ದೇವಾಲಯಕ್ಕೆ ಹೋಗಿದ್ದಾರೆ. ಈ ಬಟ್ಟೆಯಲ್ಲಿ ಅವರನ್ನು ದೇವಾಲಯ ಪ್ರವೇಶಿಸಲು ಬಿಡಬಾರದಿತ್ತು. ಅದನ್ನು ನಾನು ಅದನ್ನು ಬಲವಾಗಿ ವಿರೋಧಿಸುತ್ತೇನೆ. ಇಂತಹ ನನ್ನ ಹೇಳಿಕೆಗೆ ನನ್ನನ್ನು ನೀವು ಕೋಮುವಾದಿ ಎಂದು ಕರೆಯುವುದಾದಲ್ಲಿ ಅದನ್ನು ಸ್ವೀಕರಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ.
ಮುಂದುವರಿದು “ಇವು ಪಾಶ್ಚಿಮಾತ್ಯ ಉಡುಪುಗಳು, ಬಿಳಿಯರಿಂದ ಆವಿಷ್ಕರಿಸಿದ ಮತ್ತು ಪ್ರಚಾರ ಮಾಡಲ್ಪಟ್ಟವು. ನಾನು ಒಮ್ಮೆ ವ್ಯಾಟಿಕನ್ಗೆ ಹೋದಾಗ ಶಾರ್ಟ್ಸ್ ಮತ್ತು ಟೀ-ಶರ್ಟ್ ಧರಿಸಿದ್ದೆ, ಆ ವೇಳೆ ನನಗೆ ಆವರಣದೊಳಗೆ ಬಿಡಲಿಲ್ಲ. ನಾನು ಮತ್ತೆ ನನ್ನ ಹೋಟೆಲ್ಗೆ ಹೋಗಿ ಬೇರೆ ಡ್ರೆಸ್ನಲ್ಲಿ ಬರಬೇಕಾಗಿ ಬಂತು. ಕ್ಯಾಶುಯಲ್ಗಳಂತೆ ನೈಟ್ ಡ್ರೆಸ್ಗಳನ್ನು ಧರಿಸುವ ಈ ಕೋಡಂಗಿಗಳು ಸೋಮಾರಿಗಳು ಮತ್ತು ಕುಂಟರಲ್ಲದೆ ಬೇರೇನೂ ಅಲ್ಲ ಎಂದು ತಿಳಿಸಿದ್ದಾರೆ.
ಕಂಗನಾ ಮುಂದೆ ‘ತುರ್ತು ಪರಿಸ್ಥಿತಿ’ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಈಕೆ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರ ಮಾಡಲಿದ್ದಾರೆ. ಅವರು ‘ತೇಜಸ್’ ಚಿತ್ರದಲ್ಲಿಯೂ ಪಾತ್ರ ನಿರ್ವಹಿಸಲಿದ್ದು, ಇದರಲ್ಲಿ ಅವರು ಭಾರತೀಯ ವಾಯುಪಡೆಯ ಅಧಿಕಾರಿಯಾಗಿ ನಟಿಸಿದ್ದಾರೆ.
ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ಅರಣ್ಯಗಳಲ್ಲಿ ಕಾಡ್ಗಿಚ್ಚಿನ ಭಯವೂ ಶುರುವಾಗಿದ್ದು, ಇದೀಗ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ…
ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…
ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…
ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…
ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…
ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…