ಟಾಲಿವುಡ್ ನಟ ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಪವನ್ ಕಲ್ಯಾಣ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಪವನ್ ಕಲ್ಯಾಣ್ ಅವರು ಹೈದರಾಬಾದ್ಗೆ ಮರಳಿದ್ದಾರೆ. ನಂತರ ಅವರು ಸಹೋದರ ಮೆಗಾ ಸ್ಟಾರ್ ಚಿರಂಜೀವಿ ನಿವಾಸಕ್ಕೆ ತೆರಳಿದ್ದಾರೆ. ನಂತರ ಅಣ್ಣ ತಮ್ಮನಿಗೆ ಅದ್ಧೂರಿ ಸ್ವಾಗತದ ಮೂಲಕ ಸ್ವಾಗತಿಸಿದ್ದು ತಮ್ಮನನ್ನು ಕಂಡು ಕಣ್ಣು ತುಂಬಿಕೊಂಡಿದ್ದಾರೆ.
ಆರತಿ ಎತ್ತಿ, ತಿಲಕ ಇಟ್ಟು ಪವನ್ ಕಲ್ಯಾಣ್ ಅವರನ್ನು ಬರಮಾಡಿಕೊಳ್ಳಲಾಗಿದೆ. ಅಣ್ಣನ ಕಾಲಿಗೆ ನಮಸ್ಕರಿಸಿದ ಪವನ್ ಕಲ್ಯಾಣ್ ಅವರು ಆಶೀರ್ವಾದ ಪಡೆದಿದ್ದಾರೆ. ಇಡೀ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಈ ವೇಳೆ ರಾಮ್ ಚರಣ್ ಕೂಡ ಪವನ್ ಕಲ್ಯಾಣ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ.

