ಕುಂದಾಪುರ: ಏಕನ ಪ್ರೊಡಕ್ಷನ್ ತಂಡದ ವತಿಯಿಂದ ನಿರ್ಮಾಣಗೊಂಡ ಕುಂದಾಪುರ ಕನ್ನಡ ಭಾಷೆಯ ಸೊಗಡಿನ ಹೇಯ್ ಲಡ್ಕಿ ಮ್ಯೂಸಿಕಲ್ ವೀಡಿಯೋ ಸಾಂಗ್ನ್ನು ಕನ್ನಡ ಖ್ಯಾತ ಚಲನಚಿತ್ರ ನಿರ್ದೇಶಕ ಸಿಂಪಲ್ ಸುನಿ ಅವರು ಜ.14 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕರಾವಳಿ ಭಾಗದಲ್ಲಿ ಇದೆ ಮೊದಲ ಬಾರಿಗೆ ಎನ್ನುವಂತೆ ಹೇಯ್ ಲಡ್ಕಿ ಮ್ಯೂಸಿಕಲ್ ವೀಡಿಯೋ ಸಾಂಗ್ವೊಂದಕ್ಕೆ ಕನ್ನಡದ ಜನಪ್ರೀಯ ಗಾಯಕ ರಾಜೇಶ್ ಕೃಷ್ಣನ್ ಅವರು ಧ್ವನಿಯನ್ನು ನೀಡಿದ್ದಾರೆ.
ಸಂಗೀತ ನಿರ್ದೇಶಕ ಗೌತಮ್ ಕೆ ಸಂಗೀತ ಸಂಯೋಜನೆ ಹಾಗೂ ಸೌಂಡ್ ವಿಭಾಗದಲ್ಲಿ ಶರತ್ ಉಚ್ಚಿಲ ಕೆಲಸವನ್ನು ನಿರ್ವಹಿಸಿದ್ದರು.ಸಂಕಲನ ಕಾರಕರಾಗಿ ತಕ್ಷಕ್,ಸಾಹಿತ್ಯ ಮತ್ತು ನಿರ್ದೇಶನ ವಿಭಾಗದಲ್ಲಿ ಆರ್.ಪ್ರಹ್ಲಾದ್ ಆಚಾರ್ಯ ಅರಾಟೆ,ಛಾಯಾಗ್ರಹಣ ಸನತ್ ಉಪ್ಪುಂದ,ನಿರ್ಮಾಪಕರಾಗಿ ಮಂಜುನಾಥ ಸಾಲಿಯಾನ್ ತ್ರಾಸಿ ಮತ್ತು ಗೌತಮ್ ಕೆ,ಪ್ರಹ್ಲಾದ್ ಆಚಾರ್ಯ,ನಾಯಕಿಯಾಗಿ ಚಿತ್ರಾ ಸೂರಜ್ ಆಚಾರ್ಯ ನಟನೆ ಮಾಡಿದ್ದರು.