ಬೆಂಗಳೂರು: ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ 17 ಆರೋಪಿಗಳು ಜೈಲು ಸೇರಿದ್ದಾರೆ. ದರ್ಶನ್ ನನ್ನು ನೋಡಲು ಹುಬ್ಬಳ್ಳಿಯಿಂದ ಅಜ್ಜಿಯೊಬ್ಬರು ಜೈಲಿಗೆ ಬಂದಿರುವ ಘಟನೆ ನಡೆದಿದೆ.
ನಟ ದರ್ಶನ್ ಅವರನ್ನು ನೋಡಲು ಹುಬ್ಬಳ್ಳಿಯಿಂದ ಬಂದಿದ್ದೀನಿ. ಸಾರಥಿ, ಕಾಟೇರ, ಬುಲ್ ಬುಲ್, ಬೃಂದಾವನ ಸೇರಿದಂತೆ ಅವರ ಎಲ್ಲ ಸಿನಿಮಾಗಳನ್ನು ನೋಡಿದ್ದೇನೆ. ಅಷ್ಟು ದೂರದಿಂದ ನಾನು ಬಂದಿದ್ದೇನೆ. ಈಗ ಅವರನ್ನು ನೋಡಲು ನನ್ನನ್ನು ಬಿಡಬೇಕು. ಬರೀ ಅವರ ಕುಟುಂಬದವರನ್ನೇ ಬಿಡು ಅಂತ ದರ್ಶನ್ ಅವರು ಹೇಳಿದ್ದಾರಂತೆ. ಅದರಂತೆ ನಮ್ಮಂತ ಅಭಿಮಾನಿಯನ್ನ ನೋಡಲು ಬಿಡಬೇಕು. ನಾನು ಬಡವಳು, ನನ್ನ ಹತ್ತಿರ ದುಡ್ಡಿಲ್ಲ. ಆದರು ದರ್ಶನ್ ಸಿನಿಮಾ ರಿಲೀಸ್ ಆದಾಗ ನೋಡುತ್ತಿದ್ದೆ ಎಂದು ಹೇಳಿದ್ದಾರೆ.
ದರ್ಶನ್ ಅವರು ಅಜ್ಜಿಯನ್ನು ನೋಡಲು ಬಿಡು ಎಂದು ಹೇಳಿದರೆ ಇವರು ಬಿಡುತ್ತಾರೆ. ದರ್ಶನ್ ಹೊರಗೆ ಬರಬೇಕು ಅಂತ ಯಾವ್ಯಾವ ದೇವರಿಗೆ ಕೈ ಮುಗಿದು ಕೇಳಿದ್ದೀನಿ ಗೊತ್ತಾ?. ನಂದು ಮನೆಯಿಲ್ಲ, ಆಸ್ತಿಯಿಲ್ಲ ಆದರೂ ದರ್ಶನ್ ಸಿನಿಮಾಗಳನ್ನ ಯಾವುದು ಬಿಡಲ್ಲ ಎಂದು ಅಜ್ಜಿ ಹೇಳಿದ್ದಾರೆ.