News Karnataka Kannada
Monday, May 06 2024
ಬಾಲಿವುಡ್

ಯಾವತ್ತೂ ಎಲ್ಲರ ವಿಷಯದಲ್ಲಿ ಪೊಸಿಟಿವ್ ಆಗಿರಿ ಎಂದು ಯುವಜನತೆಗೆ ಕಿವಿ ಮಾತು ಹೇಳಿದ ಕಿಂಗ್‌ ಖಾನ್

'ಯುವಜನತೆ ಹಲವು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕಿದೆ.
Photo Credit : News Kannada

ಮುಂಬೈ:  ‘ಯುವಜನತೆ ಹಲವು ಸಂಗತಿಗಳನ್ನು ಅಳವಡಿಸಿಕೊಳ್ಳಬೇಕಿದೆ. ನಿಮ್ಮ ಸುತ್ತಲಿನವರು ಏನು ಮಾಡುತ್ತಿದ್ದಾರೆ, ಯಾವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅವರು ಯುವಜನತೆಗೆ ಸಂದೇಶ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಶಾರುಖ್ ಖಾನ್, ಬೇರೆಯವರನ್ನು ಹೇಗೆ ತುಳಿಯುವುದು ಎಂಬ ವಿಚಾರದ ಬಗ್ಗೆ ಯೋಚಿಸಬೇಡಿ. ನೆಗೆಟಿವ್ ವಿಚಾರಗಳು ಬೇಡ, ಯಾವತ್ತೂ ಎಲ್ಲರ ವಿಷಯದಲ್ಲಿ, ಜೀವನದ ಸಂಗತಿಗಳಲ್ಲಿ ಪೊಸಿಟಿವ್ ಆಗಿರಿ. ನೀವು ಒಳ್ಳೆಯ ಸಂಗತಿಗಳನ್ನು ಯೋಚಿಸುವ ಮೂಲಕ ಯಾವತ್ತೂ ಯಂಗ್ ಆಗಿ ಕಾಣುತ್ತೀರಿ, ನಿಮ್ಮ ಕಣ್ಣುಗಳಲ್ಲಿ ತೇಜಸ್ಸು ಹೊಮ್ಮುತ್ತಿರುತ್ತದೆ. ಈ ರೀತಿ ನೀವು ಇರಲು ಆರಂಭಿಸಿದರೆ ನಿಮ್ಮ ಕೆಲಸದಲ್ಲಿ ನೀವು ಬೇಗ ಯಶಸ್ಸು ಸಾಧಿಸುತ್ತೀರಿ. ಯಾವುದೇ ಸಾಧನೆ ಅಸಾಧ್ಯವಲ್ಲ ಎಂದು ನಂಬಿ ಅದರಂತೆ ಮುಂದುವರಿಯಿರಿ. ಲೈಫ್ ಬಗ್ಗೆ ಕೃತಜ್ಞರಾಗಿರಿ’ ಎಂದಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಬಾದ್‌ ಶಾ ನಟ ಶಾರುಖ್ ಖಾನ್ ಅವರು ಯುವ ಜನತೆಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು