ತಮಿಳು ಚಿತ್ರ ‘ಕೈತಿ’ಯ ಹಿಂದಿ ರೀಮೇಕ್ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದ ಬೆನ್ನಿಗೇ ನಟ ಅಜಯ್ ದೇವಗನ್ ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ಅಜಯ್ರ ಈ ಯಾತ್ರೆಯ ಅನೇಕ ವಿಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕಪ್ಪು ಬಣ್ಣದ ಮಾಲೆ ಧರಿಸಿದ ಅಜಯ್ ದೇವಗನ್ರನ್ನು ಚಿತ್ರಗಳಲ್ಲಿ ನೋಡಬಹುದಾಗಿದೆ.
ತೀರ್ಥ ಕ್ಷೇತ್ರದ ಭೇಟಿಗೂ ತಿಂಗಳ ಮುಂಚಿನಿಂದಲೇ ಮಾಲೆ ಧರಿಸಿ ಸಕಲ ವಿಧಿಗಳನ್ನು ಪೂರೈಸಿದ ಅಜಯ್ ದೇವಗನ್, ನೆಲದ ಮೇಲೆ ಮಲಗುವುದರಿಂದ ಹಿಡಿದು ಶಾಖಾಹಾರಿ ಆಹಾರವನ್ನೇ ಸೇವಿಸುವವರೆಗೂ ಕಟ್ಟುನಿಟ್ಟಿನ ದಿನಚರಿ ಪಾಲಿಸಿಕೊಂಡು ಬಂದಿದ್ದರು.