ಮುಂಬೈ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರು ದಿವಂಗತ ನಟ ನಿರ್ದೇಶಕ ನಿರ್ದೇಶಕ ಸತೀಶ್ ಕೌಶಿಕ್ ಅವರನ್ನು ನೆನಪಿಸಿಕೊಂಡಿದ್ದಾರೆ.
ಸತೀಶ್ ಅವರನ್ನು ಮಹಾನ್ ಮಾನವ ಎಂದು ಕರೆದಿದ್ದಾರೆ. ತಮ್ಮ ಸಿನಿಪಯಣದ ಆರಂಭಿಕ ವರ್ಷಗಳಲ್ಲಿ ಮಾಡಿದ ಸಹಾಯ, ಮಾರ್ಗದರ್ಶನ ಕುರಿತು ವಿವರಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಕಥೆಗಳಲ್ಲಿ ಹೀಗೆ ಬರೆದಿದ್ದಾರೆ: ” ಕೌಶಿಕ್ ಒಬ್ಬ ಮಹಾನ್ ನಟ, ಮಹಾನ್ ಮಾನವ. ಮುಂಬೈ ನಗರದಲ್ಲಿ ನನ್ನ ಹೋರಾಟದ ದಿನಗಳಲ್ಲಿ ನನಗೆ ಸತೀಶ್ ಅಂತಹವರ ನೆರವು ದೊರೆಯತಿರುವುದನ್ನು ಮರೆಯಲಾಗದು. ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ಮತ್ತು ನಗುವನ್ನು ಯಾವಾಗಲೂ ನೆನಪಿಸಿಕೊಳ್ಳುತ್ತೇನೆ ಸರ್ ಎಂದು ಮಡಿಸಿದ ಕೈಗಳ ರಿಪ್ ಎಮೋಜಿ ಹಾಕಿದ್ದಾರೆ.
ಸತೀಶ್ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ಅಶೋಕ್ ಪಂಡಿತ್ ಸೇರಿದಂತೆ ಅವರ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ವರ್ಸೋವಾ ಚಿತಾಗಾರದಲ್ಲಿ ನಡೆಸಲಾಯಿತು