ಬೆಂಗಳೂರು: ಎಲ್ಲ ಯುವಕರಿಗೂ ಗೋವಾ ಟ್ರಿಪ್ ಹೋಗಬೇಕು ಎಂಬ ಕನಸು ಇರ್ತದೆ. ಆದ್ರೆ ಗೋವಾ ಟ್ರಿಪ್ ಪ್ಲ್ಯಾನ್ ಮಾಡಿದ ನಂತರವೂ ಕ್ಯಾನ್ಸಲ್ ಆಗಿಬಿಟ್ಟರೆ, ಆಗ ಆಗುವ ನೋವು ಹೇಗಿರುತ್ತದೆ ಎನ್ನುವ ಬಗ್ಗೆ ಹಾಡು ಈಗ ರಾಜ್ಯಾದ್ಯಂತ ವೈರಲ್ ಆಗಿದೆ.
ಕನ್ನಡದ ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹಳ್ಳಿಮೇಸ್ಟ್ರು ಸಿನಿಮಾದ ‘ಪ್ರೀತಿ ಮಾಡೋದ್ ತಪ್ಪೇನಿಲ್ಲಾ… ಅಂತ ಎಲ್ಲ ಹೇಲ್ತಾರಲ್ಲಾ..’ ಹಾಡಿನ ಟ್ಯೂನ್ಗೆ ಗೋವಾ ಟ್ರಿಪ್ ಕ್ಯಾನ್ಸಲ್ ಆಗಿರುವ ಸಾಹಿತ್ಯವನ್ನು ಸೇರಿಸಿ ಹಾಡನ್ನು ಸಿದ್ಧಪಡಿಸಿದ್ದಾರೆ. ಹೀಗೆ, ಪ್ರಕಾಶ್ ಆರ್.ಕೆ. ಎನ್ನುವ ಯೂಟ್ಯೂಬರ್ ಗೋವಾ ಟ್ರಿಪ್ ಕ್ಯಾನ್ಸಲ್ ಎನ್ನುವ ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸಿ ಉತ್ತರ ಕರ್ನಾಟಕ ಭಾಷೆಯ ಶೈಲಿಯಲ್ಲಿ ಈ ಸಾಹಿತ್ಯ ರಚಿಸಿ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಕ್ಯಾಸಿನೋ, ಪಬ್, ಮಸಾಜ್, ಮಜಾ ಮಾಡುವುದು ಸೇರಿ ಗೋವಾಕ್ಕೆ ಹೋಗುವ ಹುಡುಗರು ಇಟ್ಟುಕೊಳ್ಳುವ ಬಗ್ಗೆ ಹಾಡಿನಲ್ಲಿ ತೋರಿಸಿದ್ದಾರೆ.
ಕಾವ್ ಕಾವ್ ಕರಿತೈತಿ ಗೋವಾ.. ಕಾವ್ ಕಾವ್ ಕರಿತೈತಿ ಗೋವಾ..
ಗೋವಾಗೆ ಹೋಗೋದು ತಪ್ಪೇನಿಲ್ಲಾ.. ಅಂತಾ ಎಲ್ಲ ಹೇಳ್ತಾರಲ್ಲಾ..
ಕ್ಯಾಸಿನೋದೊಳಾಗ ಹೋಗಬೇಕಂತಾ, ಪಬ್ಬಿನೊಳಗಾ ನಾ ಕುಣಿಬೇಕಂತಾ..
ಮಸಾಜ್ ಮಾಡಿಸ್ಕೋಬೇಕು, ಮಜಾನು ತಗೋಬೇಕ್ ಆಸೇನು ಇಟ್ಟಿದ್ಯಾ..
ಆಸೆ ಏನೋ ನೀ ಚೊಲೋ ಮಾಡಿ, ರೊಕ್ಕ ಎಷ್ಟರ ನೀ ಗೋಳೆ ಮಾಡಿ..
ಕಾಜುನು ಕುಡಿಬೇಕ್, ಫುಲ್ ಪಾಯಿಂಟ್ ತರಬೇಕ್ ರೊಕ್ಕನೇ ಇಲ್ಲ ಸಿದ್ಯಾ….
ಸಾಲ ಸೋಲ ಮಾಡಿ ಗೋವಾಕ್ಕೆ ಹೋಗೋಣ.. ಮೋಜು ಮಸ್ತಿ ಮಾಡಿ ಹೊಳ್ಳಿ ಬರೋಣ..
ಸಾಲ ಮಾಡಿ ಹೋಗೋದು ಹರಕ್ಕತ್ತೇನಾ.. ಮೂರು ಇಟ್ಟು ಬಾರಿಸಕ್ಕತ್ತೀಯೇನಾ..
ಯಾರ ಮಾತ ಕೇಳಿ ನೀ ಪ್ಲ್ಯಾನ ಮಾಡಿದೆ? ನಿಮ್ಮ ಮಾತ ಕೇಳಿ ಪ್ಲ್ಯಾನ ಮಾಡಿದ್ಯಾ…
ಅಂದುಕೊಂಡಂಗೆ ಆಗೇ ಇಲ್ಲಾ, ನಿಮ್ಮಿಂದಾನೆ ಹಿಡಿದೈತೆ ಹಳ್ಳಾ…
ಈ ಹಾಡು ಇದೀಗ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.