ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ‘ಮತ್ತೆ ಮನ್ವಂತರ’ದ ಮೂಲಕ ಕಿರುತೆರೆಗೆ ವಾಪಾಸಾಗಲಿದ್ದಾರೆ.
ಈಚೆಗೆ ಟಿ.ಎನ್.ಸೀತಾರಾಮ್ ನಿರ್ದೇಶನದಲ್ಲಿ ಮತ್ತೆ ಮನ್ವಂತರ ಧಾರವಾಹಿ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿ ಸೆಟ್ಟೇರಿತ್ತು. ಧಾರವಾಹಿಯ ಚಿತ್ರೀಕರಣ ಚಾನಲ್ ಅನುಮತಿ ನೀಡಿದ ನಂತರ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿರುವ ಸೀತಾರಾಮ್, ಈಗ ನಡೆಯುತ್ತಿರುವುದು ಪೈಲಟ್ ಎಪಿಸೋಡ್ ಎಂದು ಹೇಳಿದ್ದಾರೆ.
ತಾರಾಗಣದಲ್ಲಿ ಮೇಧಾ ವಿದ್ಯಾಭೂಷಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿರಂಜನ್ ದೇಶಪಾಂಡೆ, ಅಜಿತ್ ಹಂದೆ, ಮೇಘಾ ನಾಡಿಗೇರ್, ಪ್ರಶಾಂತ್ ಶೆಟ್ಟಿ (ಹೊಸ ಪರಿಚಯ) ಮೊದಲಾದವರು ಬಣ್ಣ ಹಚ್ಚಲಿದ್ದಾರೆ.