ಬೆಂಗಳೂರು: ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಹೆಸರಿಗೆ ಕಳಂಕ ತಂದ ಹಿನ್ನೆಲೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರನ್ನು ನೀಡಿದ್ದು ಅವರು ಸೈಬರ್ ಕ್ರೈಮ್ ನಲ್ಲಿ ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ ಎಂದು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಹೇಳಿದರು .
ಮೀ ಟೂ ಅಭಿಯಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅರ್ಜುನ್ ಸರ್ಜಾ ವಿರುದ್ಧ ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಕರ್ನಾಟಕದ ಇಬ್ಬರು ಹಿರಿಯ ನಟರು ಇದರಲ್ಲಿ ಭಾಗಿಯಾಗಿದ್ದಾರೆ ಎಂದರು.
ಒಟ್ಟು 400 ಪುಟಗಳ ದಾಖಲೆ ಸಮೇತ ಎಫ್ ಐಆರ್ ನ್ನು ದಾಖಲಿಸಲಾಗಿದೆ. ಅದಲ್ಲದೆ ಇನ್ನು ಮುಂದೆ ಶ್ರುತಿ ವಿರುದ್ಧ 2 ಎಫ್ ಐಆರ್ ದಾಖಲಾಗಲಿದೆ ಎಂದರು.