News Karnataka Kannada
Sunday, May 19 2024
ಮನರಂಜನೆ

ಶಿವಣ್ಣರಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಚಾಲನೆ

Photo Credit :

ಶಿವಣ್ಣರಿಂದ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಚಾಲನೆ

ಹಾಸನ: ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಕನ್ನಡ ಚಲನಚಿತ್ರ ರಂಗದ ಸೂಪ ಸ್ಟಾರ್ ಮತ್ತು ಕಲ್ಯಾಣ್ ಜ್ಯುವೆಲ್ಲರ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಶಿವರಾಜ್ ಕುಮಾರ್ ಅವರು ಶುಕ್ರವಾರ ಹಾಸನ ನಗರದಲ್ಲಿ ಬಹು ನಿರೀಕ್ಷಿತ ಕಲ್ಯಾಣ್ ಜ್ಯುವೆಲ್ಲರ್ಸ್ ನ ಶೋರೂಂನ್ನು ಉದ್ಘಾಟಿಸಿದ್ದಾರೆ.

ಶಿವರಾಜ್ ಕುಮಾರ್ ಅವರು ರಾಜ್ಯದ ಹಾಸನ, ಉಡುಪಿ, ಶಿವಮೊಗ್ಗ, ದಾವಣಗೆರೆ ಮತ್ತು ಬಳ್ಳಾರಿಯ ಒಟ್ಟು ಐದು ಶೋರೂಂಗಳನ್ನು ಒಂದೇ ಬಾರಿಗೆ ಉದ್ಘಾಟನೆ ಮಾಡಿರುವುದು ವಿಶೇಷವಾಗಿದೆ. ಈ ವೇಳೆ ಕಲ್ಯಾಣ್ ಜ್ಯುವೆಲ್ಲರ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಟಿ.ಎಸ್.ಕಲ್ಯಾಣರಾಮನ್ ಮತ್ತು ಕಾರ್ಯಕಾರಿ ನಿರ್ದೇಶಕರಾದ ರಾಜೇಶ್ ಕಲ್ಯಾಣರಾಮನ್ ಮತ್ತು ರಮೇಶ್ ಕಲ್ಯಾಣರಾಮನ್ ಅವರು ಇದ್ದರು. ಸೂಪರ್ ಸ್ಟಾರ್ ಶಿವರಾಜ ಕುಮಾರ್ ಅವರು ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ಶುಭ ಹಾರೈಸಿ ಮಾತನಾಡಿ, ಹಾಸನದಲ್ಲಿ ಜ್ಯುವೆಲ್ಲರಿ ತೆರೆದಿರುವುದು ಖುಷಿಯಾಗಿದೆ. ನಾನು ಕಲ್ಯಾಣ್ ಜ್ಯುವೆಲ್ಲರ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೇನೆ. ಈ ನಡುವೆ ನಾನು ರಾಜಕೀಯಕ್ಕೆ ಪ್ರವೇಶ ಮಾಡುತ್ತೇನೆಂಬ ವದಂತಿ ಹರಡಿದ್ದು, ಅದು ಸುಳ್ಳು. ನನಗೆ ರಾಜಕೀಯ ಇಷ್ಟವಿಲ್ಲ. ರಾಹುಲ್ ಗಾಂಧಿ ಮನೆಗೆ ಬಂದಿದ್ದು ನಿಜ ಅದು ರಾಜಕೀಯ ಮಾತನಾಡಲು ಅಲ್ಲ  ಅಮ್ಮನ ಅಗಲಿಕೆಯ  ಹಿನ್ನಲೆಯಲ್ಲಿ ಸಾಂತ್ವನ ಹೇಳಲ್ಲಷ್ಟೆ ಬಂದಿದ್ದಾಗಿ ಹೇಳಿದರು.

ಕಲ್ಯಾಣ್ ನ ಬ್ರ್ಯಾಂಡ್ ಗಳಾದ ಕರಕುಶಲವಿರುವ ಆ್ಯಂಟಿಕ್ ಆಭರಣವಾದ ಮುದ್ರಾ, ಝಿಹಾ ಎಂಬ ಡೈಮಂಡ್ ಆಭರಣಗಳು, ಗ್ಲೋ-ಡಾನ್ಸಿಂಗ್ ಡೈಮಂಡ್ಸ್, ನಿಮ್ಹ, ಅನೋಖಿ, ಅಪೂರ್ವ, ವಿವಾಹಕ್ಕಾಗಿ ಅಂತರ ವಜ್ರದಾಭರಣ, ದೈನಂದಿನ ಬಳಕೆಗಾಗಿ ಹೆರಾ ಡೈಮಂಡ್, ಅಮೂಲ್ಯವಾದ ಹರಳಿನಿಂದ ತಯಾರಿಸಲಾದ ರ್ಯಾಂಗ್ ಸೇರಿದಂತೆ ಹತ್ತು ಹಲವಾರು ವಿನ್ಯಾಸದ ಚಿನ್ನ ಮತ್ತು ವಜ್ರದಾಭರಣಗಳು ಈ ಶೋರೂಂಗಳಲ್ಲಿ ಲಭ್ಯವಿರುವುದಾಗಿ ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು