Categories: ಮನರಂಜನೆ

ಜನಪ್ರಿಯ ನಾಟಕವಾಗಿದ್ದ ತ್ಯಾಗಿ ಸಿನಿಮಾವಾಗಿ ತೆರೆಗೆ

ಬೇಲೂರು: ಶತನಾಟಕಕಾರ ಬೇಲೂರು ಕೃಷ್ಣಮೂರ್ತಿ ರಚಿಸಿರುವ ತ್ಯಾಗಿ ನಾಟಕವು ರಂಗಭೂಮಿಯಲ್ಲಿ ಸುಮಾರು 1000ಕ್ಕೂ ಹೆಚ್ಚು ಪ್ರದರ್ಶನಗೊಂಡು ಇಂದು ಚಲನಚಿತ್ರವಾಗಿ ಮೂಡಿ ಬರುತ್ತಿದೆ ಎಂದು ಚಲನಚಿತ್ರ ಹಾಸ್ಯ ನಟ ಡಿಂಗ್ರಿ ನಾಗರಾಜ್ ತಿಳಿಸಿದರು.

ಪಟ್ಟಣದ ಬೇಲೂರು ಕೃಷ್ಣಮೂರ್ತಿ ಮನೆಯಲ್ಲಿ ತ್ಯಾಗಿ ಚಿತ್ರತಂಡ ಹಾಗೂ ನಿರ್ದೇಶಕರು ಸೇರಿದಂತೆ ಅವರ ಮನೆಗೆ ಬಂದು ಅವರ ಆಶೀರ್ವಾದ ಪಡೆದು ನಂತರ ಮಾತನಾಡಿದ ಅವರು, ಸುಮಾರು ನೂರಾರು ನಾಟಕ ಬರೆದಿರುವ ಬೇಲೂರು ಕೃಷ್ಣಮೂರ್ತಿ ಅವರ ಹಲವು ನಾಟಕಗಳು ಚಿತ್ರಗಳಾಗಿ ತೆರೆಕಂಡಿದ್ದು, ಅದರಲ್ಲಿ ಅವರ ತ್ಯಾಗಿ ನಾಟಕವು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದ್ದು ಇಂದು ಚಲನಚಿತ್ರವಾಗಿ ಮೂಡಿಬಂದು ಯುವ ಜನಾಂಗಕ್ಕೆ ಮುಟ್ಟುವಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.

ಚಿತ್ರದ ನಿರ್ಮಾಪಕರಾದ ದಿನೇಶ್ ಹೆಗಡೆ ಮಾತನಾಡಿ, ಮಲೆನಾಡು ಭಾಗ ಸೇರಿದಂತೆ ಬೆಂಗಳೂರು, ಚಿಕ್ಕಬಳ್ಳಾಪುರ, ಸಾಗರ ಸುತ್ತಮುತ್ತ ಪ್ರಕೃತಿಯ ಸುಂದರ ಪ್ರದೇಶದಲ್ಲಿ ಚಿತ್ರೀಕರಣ ಮುಗಿಸಿ ಕೊನೆಹಂತದದಲ್ಲಿ ಬೇಲೂರಿನ ಹೊರಾಂಗಣದಲ್ಲಿ ಚಿತ್ರಣ ಮುಗಿಸಿ ಶತನಾಟಕಕಾರ ಬೇಲೂರಿನ ಕೃಷ್ಣಮೂರ್ತಿ ಮನೆಯಲ್ಲಿ ಇಡೀ ಚಿತ್ರ ತಂಡ ಅವರ ಆಶೀರ್ವಾದ ಪಡೆದು ಯುವ ನಾಯಕ ಹಾಗೂ ನಾಯಕಿಯರಾದ ಸಂತೋಷ್ ಹಾಗೂ ಪಲ್ಲವಿ ಇವರು ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರರಂಗದ ಹಾಸ್ಯ ಕಲಾವಿದರು ಭಾಗವಹಿಸಿದ್ದು, ಈ ಚಿತ್ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಚಿತ್ರದ ಸಂಭಾಷಣೆ ಹಾಗೂ ರಚನೆಕಾರ ಅಡಗೂಡಿ ಶ್ರೀನಿವಾಸ್ ಮಾತನಾಡಿ, ತ್ಯಾಗಿ ಒಂದು ಕೌಟುಂಬಿಕ ಸಾಂಸಾರಿಕ ಚಿತ್ರವಾಗಿದ್ದು, ಪ್ರತಿಯೊಬ್ಬ ಯುವ ಜನಾಂಗದವರೂ ಸಹ ನೋಡಬಹುದಾದ ಚಿತ್ರವಾಗಿದ್ದು, ಕೋವೀಡ್ ಹಿನ್ನಲೆಯಲ್ಲಿ ಚಿತ್ರ ತಡವಾಗಿದ್ದರಿಂದ ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ತೊಚ ಅನಂತ ಸುಬ್ಬರಾಯ್, ಬೇಲೂರು ಕೃಷ್ಣಮೂರ್ತಿ, ಚಿತ್ರದ ನಿರ್ದೇಶಕ ಬಾಲು ನಾಗರಾಜ್. ನಾಯಕ ಸಂತೋಷ್, ನಾಯಕಿ ಪಲ್ಲವಿ, ಅಶ್ವಥ್, ಭಾರ್ಗವ ಸೇರಿದಂತೆ ಇತರರು ಹಾಜರಿದ್ದರು.

Desk

Recent Posts

ಚುನಾವಣೆಗೂ ಮುನ್ನ ಸ್ಫೋಟ : ಮೂವರು ಅಪ್ರಾಪ್ತರು ಸೇರಿ ನಾಲ್ವರು ಸಾವು!

ಚುನಾವಣೆಗೂ ಮುನ್ನ ದಿನವೇ ಜಾರ್ಖಂಡ್‌ನ ಪಲಮುವಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು…

17 mins ago

ಚುನಾವಣೆ ಹೊತ್ತಲ್ಲೆ ಶಂಕಿತ ಪಾಕ್ ಡ್ರೋನ್ ಹಾರಾಟ : ಸೇನೆಯಿಂದ ಗುಂಡಿನ ದಾಳಿ

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್‌ಒಸಿ ಬಳಿ ಶನಿವಾರ ತಡರಾತ್ರಿ ಶಂಕಿತ ಪಾಕಿಸ್ತಾನಿ ಡ್ರೋನ್ ಮೇಲೆ ಭಾರತೀಯ ಸೇನಾ…

29 mins ago

ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ನಿರೀಕ್ಷೆ: ಯೆಲ್ಲೋ ಅಲರ್ಟ್

ಇಂದು ರಾಜ್ಯದ 15 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ದಕ್ಷಿಣ ಕನ್ನಡ, ಉಡುಪಿ,…

52 mins ago

ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಆರ್.ಪ್ರಜ್ಞಾನಂದಗೆ ಮತ್ತೊಂದು ಗೆಲುವು

ಸೂಪರ್‌ಬಿಟ್‌ ರ್‍ಯಾಪಿಡ್ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧ ಭಾರತದ ಗ್ರ್ಯಾಂಡ್…

1 hour ago

ನಟ ಚೇತನ್​ ಚಂದ್ರ ಮೇಲೆ 20 ಜನರಿಂದ ಹಲ್ಲೆ : ದೂರು ದಾಖಲು

ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಯುವ ನಟ ಚೇತನ್ ಚಂದ್ರ ಮೇಲೆ ಬೆಂಗಳೂರಿನಲ್ಲಿ ಹಲ್ಲೆ ನಡೆದಿದೆ. ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ…

1 hour ago

ಪೆನ್​ಡ್ರೈವ್ ಹಂಚಿಕೆ ಪ್ರಕರಣ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14…

2 hours ago