ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ನಲ್ಲಿ ಶೈಕ್ಷಣಿಕ ವರ್ಷ 2024 ಜನವರಿ 20 ರಂದು ನಡೆದ ಜವಾಹರ್ ನವೋದಯ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ತರಬೇತಿ ಪಡೆದ ವಿದ್ಯಾರ್ಥಿಗಳ ಎರಡನೇ ಹಂತದ ಆಯ್ಕೆ ಪ್ರಕ್ರೀಯೆಯಲ್ಲಿ 2 ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.

ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ನೀರ್ಕಜೆ ನಿವಾಸಿಯಾದ ಪ್ರಭುಕುಮಾರ್ ಎಸ್.ಬಿ ಹಾಗೂ ತನುಜಾ ಪಿ. ಇವರ ಪುತ್ರನಾದ ಅರುಣ್ಕುಮಾರ್ ಪಿ., ಬಂಕೊಳಿ ಬೆಟ್ಟಂಪಾಡಿ ಇರ್ದೆ ನಿವಾಸಿಯಾದ ರಾಜಗೋಪಾಲ್ ಹಾಗೂ ರಮ್ಯ ದಂಪತಿಗಳ ಪುತ್ರಿಯಾದ ಲಹರಿ ಭಾರದ್ವಾಜ್ ಇವರು ಆಯ್ಕೆಯಾಗಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಭವಿಷ್ಯವು ಉಜ್ಚಲಗೊಳ್ಳಲಿ ಎಂದು ಸಂಸ್ಥೆಯ ಸಂಚಾಲಕರಾದ ಶ್ರೀಯುತ ಗೋಕುಲ್ನಾಥ್ ಪಿ.ವಿ. ಶುಭ ಹಾರೈಸಿದರು. ಜವಾಹರ್ ನವೋದಯ ವಿದ್ಯಾಲಯದ 2024-25ನೇ ಸಾಲಿನ 6 ನೇ ತರಗತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ ಆರಂಭಗೊಂಡಿದ್ದು ದಿನಾಂಕ 16-09-2024 ಕೊನೆಯ ದಿನವಾಗಿರುತ್ತದೆ.
ನಮ್ಮ ಸಂಸ್ಥೆಯಲ್ಲಿ ಈ ಪ್ರವೇಶ ಪರೀಕ್ಷೆಗೆ ಪೂರ್ವ ತಯಾರಿ ತರಗತಿಗಳು ಪ್ರಾರಂಭಗೊಂಡಿದ್ದು, ಪ್ರತಿ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಸಂಜೆ 3.30ರ ವರೆಗೆ ತರಗತಿಗಳು ನಡೆಯಲಿದೆ. ಆಸಕ್ತರು ಸಂಸ್ಥೆಯ ಕಛೇರಿಯನ್ನು ಭೇಟಿ ಮಾಡಬಹುದು.

