ಹುಬ್ಬಳ್ಳಿ: ಶ್ರೀರಾಮ ಸೇನೆ ಮುಖಂಡರ ಫೇಸ್‌ಬುಕ್ ಬ್ಲಾಕ್ ಮಾಡುವ ಅಧಿಕಾರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಶ್ರೀರಾಮ ಸೇನೆ ಮುಖಂಡರ ಫೇಸ್‌ಬುಕ್ ಖಾತೆ ಬ್ಲಾಕ್ ಆಗಿರೋದು ನನ್ನ ಗಮನಕ್ಕಿಲ್ಲ. ಸುಖಾ ಸುಮ್ಮನೆ ಖಾತೆ ಬ್ಲಾಕ್ ಮಾಡಲು ಬರಲ್ಲ.

ಹಾಗೊಂದು ವೇಳೆ ಅವರ ಖಾತೆಗಳನ್ನು ಬ್ಲಾಕ್ ಮಾಡಿದ್ದರೆ ಅದು ತಪ್ಪು. ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರವಿದೆ. ಅವರ ಖಾತೆಗಳನ್ನು ಬ್ಲಾಕ್ ಮಾಡುವ ಪ್ರಯತ್ನಗಳೂ ನಡೆದಿರಬಹುದು. ಈ ರೀತಿಯ ಧೋರಣೆ ಸರಿಯಲ್ಲ ಎಂದು ಹೇಳಿದರು.