ಹುಬ್ಬಳ್ಳಿ : ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿದೆ ಎಂಬ ಪ್ರಹ್ಲಾದ್​ ಜೋಶಿ ಸೇರಿದಂತೆ ಇನ್ನಿತರ ಬಿಜೆಪಿಗರು ಆರೋಪ ಮಾಡುತ್ತಿದ್ದು, ಪ್ರಹ್ಲಾದ್​ ಜೋಶಿ ಭಯೋತ್ಪಾದಕ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

2022ರಲ್ಲಿ ಹಳೇ ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆ ಪ್ರಕರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ವಾಪಸ್​​ ಪಡೆದ ವಿಚಾರಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಭಯೋತ್ಪಾದಕರಿಗೆ ಸರ್ಕಾರ ಸಪೋರ್ಟ್ ಮಾಡುತ್ತಿದೆ ಎಂದಿದ್ದರು. ಅವರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಸಿಎಂ ಪ್ರತ್ಯುತ್ತರ ನೀಡಿದ್ದಾರೆ.

ಪ್ರಕರಣ ಹಿಂಪಡೆದ ಸಚಿವ ಸಂಪುಟದ ತೀರ್ಮಾನವು ಕೋರ್ಟ್​​​​​ ಮುಂದೆ ಹೋಗಬೇಕು. ಅಲ್ಲಿ ಒಪ್ಪಿಗೆ ಸಿಕ್ಕರೆ ಮಾತ್ರ ಪ್ರಕರಣ ಹಿಂಪಡೆಯಲು ಸಾಧ್ಯವಾಗುತ್ತದೆ. ಅದು ಬಿಟ್ಟು ಸುಖಾಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು. ಇಷ್ಟು ಮಾತನಾಡುವ ಬಿಜೆಪಿಯವರು ಏನ್ ಕಡಿಮೆ ಇಲ್ಲ. ಅವರು ಸಹ ಈ ರೀತಿ ಅನೇಕ ಪ್ರಕರಣಗಳನ್ನು ವಿತ್‌ಡ್ರಾ ಮಾಡಿದ್ದರು ಎಂದು ಸಿಎಂ ಚಾಟಿ ಬೀಸಿದರು.