Bengaluru 21°C
Ad

“ರೇಣುಕಾಸ್ವಾಮಿಗೆ ಸಿಕ್ಕಾಪಟ್ಟೆ ಟಾರ್ಚರ್. . ಕೋಳಿ ಎಸೆದಂಗೆ ಗೋಡೆಗೆ ಎಸೆದಿದ್ದ”

Dboss

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅದೆಷ್ಟು ಕ್ರೌರ್ಯ ನಡೆದಿದೆ ಗೊತ್ತಾ? ಅಸಲಿ ಸತ್ಯ ನಿಜಕ್ಕೂ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಹಾಗೂ ಮತ್ತವರ ಗ್ಯಾಂಗ್‌ ಅನ್ನು ಪೊಲೀಸರು ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತನಿಖೆ ವೇಳೆ ಅತ್ಯಂತ ಆಘಾತಕಾರಿ ಅಂಶಗಳು ಬಯಲಾಗಿವೆ. ತನಿಖೆಯಲ್ಲಿ ಕೊಲೆಯ ಸಾಕ್ಷಿಗಳು ಸಿಕ್ಕಿರುವಾಗಲೇ ಪೊಲೀಸ್ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ. . ಆ ಆಡಿಯೋದಲ್ಲಿ ದರ್ಶನ್ ಮತ್ತವರ ಗ್ಯಾಂಗ್ ರೇಣುಕಾಸ್ವಾಮಿ ಅದೆಷ್ಟು ಕಠೋರವಾಗಿ ಸಾಯಿಸಿದ್ದಾರೆ ಅನ್ನೋ ವಿಚಾರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕೊಲೆಯಾದ ರೇಣುಕಾಸ್ವಾಮಿಗೆ ಸಿಕ್ಕಾಪಟ್ಟೆ ಟಾರ್ಚರ್ ಮಾಡಿದ್ದಾರೆ. ರಾಡ್ ಅಲ್ಲಿ ಹೊಡೆದಿದ್ದಾರೆ. ಆ ಬೌನ್ಸರ್‌ಗಳು ಹೊಡೆಯೋ ಏಟು ತಡೆಯೋಕೆ ಆಗತ್ತಾ? ಆ ಚಿಕ್ಕ ಹುಡುಗ. ಏನೋ ಕುಡಿದು ಬಂದು ಏನೋ ಮಾಡಿರೋದಲ್ಲ. ಕೋಳಿಯನ್ನ ಗೋಡೆಗೆ ಎಸೆದು ಬಿಡುವ ಆಗೇ ಎಸೆದಿದ್ದಾರೆ. ಸುಮ್ಮನೆ ವಾರ್ನ್ ಮಾಡಿಬಿಟ್ಟಿದ್ರೆ, ಒಂದು ಸ್ಟೇಷನ್‌ಗೆ ಕಂಪ್ಲೆಂಟ್ ಕೊಟ್ಟಿದ್ರೆ ಆಗುತ್ತಾ ಇತ್ತು. ಪೊಲೀಸ್ರು ಕರೆದು ವಾರ್ನ್ ಮಾಡಿರುತ್ತಾ ಇದ್ದರು.
13 ಜನ ಕೊಲೆಯಾದ ಜಾಗದಲ್ಲಿ ಸೇರಿದ್ದರು. ಕೊಲೆ ಆರೋಪಿಗಳಿಗೆ ಜಾಮೀನು ಸಿಗೋದು ತುಂಬಾ ಕಷ್ಟ. ಈ ಕೇಸ್‌ ಅನ್ನು ಒಂದು ವರ್ಷ ಎಳೆದುಕೊಂಡು ಹೋಗ್ತಾರೆ. 3 ತಿಂಗಳಲ್ಲ 6 ತಿಂಗಳಾದ್ರೂ ಜೈಲಿನಿಂದ ದರ್ಶನ್‌ ಹೊರಗೆ ಬರಲ್ಲ. ಹೈಕೋರ್ಟ್ ಅಲ್ಲ ಸುಪ್ರಿಂಕೋರ್ಟ್‌ಗೆ ಹೋದ್ರೂ ಜಾಮೀನು ಸಿಗಲ್ಲ ಎಂದು ಆಡಿಯೋದಲ್ಲಿ ಅಧಿಕಾರಿಯೊಬ್ಬರು ಮಾತನಾಡಿದ್ದಾರೆ.

 

Ad
Ad
Nk Channel Final 21 09 2023
Ad