ಮೈಸೂರು : 5 ಸಾವಿರ ಸಾಲ ವಾಪಸ್ ಕೊಡುವಂತೆ ಕಿರುಕುಳ ನೀಡಿದ್ದು, ಸೆಲ್ಫಿ ವಿಡಿಯೋ ಮಾಡಿ ಸಾಲ ನೀಡಿದ್ದ ವ್ಯಕ್ತಿಯ ಮನೆ ಮುಂದೆ ವಿಷ ಸೇವನೆ ಮಾಡಿ ಆಟೋ ಚಾಲಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಕುಮಾರ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಮಹದೇವನಗರದ ರವಿ ಕಿರುಕುಳ ಕೊಟ್ಟ ಆರೋಪಿ. ಸಂಜೆ ಸ್ನೇಹಿತನ ಬೈಕ್ ತೆಗೆದುಕೊಂಡು  ಶಿವಕುಮಾರ್ ಹೋಗಿದ್ದನು. ಈ ಸಮಯದಲ್ಲಿ  ರವಿ ಬೈಕ್ ಕಸಿದುಕೊಂಡಿದ್ದಾನೆ.

ಇದರಿಂದ ಮನನೊಂದ ಶಿವಕುಮಾರ್ ನನ್ನ ಸಾವಿಗೆ ರವಿ ಕಾರಣ ಎಂದು ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.  ಸದ್ಯ ಆಸ್ಪತ್ರೆಯಲ್ಲಿ  ಶಿವಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.