Bengaluru 28°C
Ad

ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಯನ್ನು ಕಾಲೇಜು ಆವರಣದಲ್ಲೇ ಹೊಡೆದು ಕೊಂದ ದಾಳಿಕೋರರು

ಪಾಟ್ನಾದ ಕಾಲೇಜು ಆವರಣದಲ್ಲೇ ಮುಸುಕುಧಾರಿಗಳು ವಿದ್ಯಾರ್ಥಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಪಾಟ್ನಾ: ಪಾಟ್ನಾದ ಕಾಲೇಜು ಆವರಣದಲ್ಲೇ ಮುಸುಕುಧಾರಿಗಳು ವಿದ್ಯಾರ್ಥಿಯನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಹರ್ಷ್​ ಬಿಎನ್​ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಪರೀಕ್ಷೆ ಮುಗಿದು ತರಗತಿಯಿಂದ ಹೊರಬಂದ ಹರ್ಷ್ ಕ್ಯಾಂಪಸ್‌ಗೆ ಬಂದು ಬುಲೆಟ್ ಬೈಕ್‌ನಲ್ಲಿ ಕುಳಿತಿದ್ದಾಗ ಆರು ಮಂದಿ ದಾಳಿಕೋರರು ಆತನ ಮೇಲೆ ದಾಳಿ ನಡೆಸಿದ್ದಾರೆ.

ದೊಣ್ಣೆಗಳಿಂದ ತೀವ್ರವಾಗಿ ಹೊಡೆದಿದ್ದಾರೆ. ಇಟ್ಟಿಗೆ ಮತ್ತು ಕಲ್ಲುಗಳಿಂದ ವಿದ್ಯಾರ್ಥಿಯ ಬೆನ್ನು ಮತ್ತು ಹೊಟ್ಟೆಯ ಮೇಲೂ ಹೊಡೆದಿದ್ದಾರೆ, ಪ್ರಜ್ಞೆ ತಪ್ಪುವವರೆಗೂ ಥಳಿಸಿ, ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಹಲ್ಲೆಯ ಬಗ್ಗೆ ಮಾಹಿತಿ ಪಡೆದ ಅವರ ಸ್ನೇಹಿತರು ಕಾನೂನು ಕಾಲೇಜಿಗೆ ಆಗಮಿಸಿ ರಕ್ತಸ್ರಾವದ ಸ್ಥಿತಿಯಲ್ಲಿ ಹರ್ಷನನ್ನು ಪಿಎಂಸಿಎಚ್‌ಗೆ ದಾಖಲಿಸಿದರು. ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದ್ದಾರೆ.

ಮೂಲತಃ ವೈಶಾಲಿ ಜಿಲ್ಲೆಯ ಬೆಲ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಜೌಲಿ ಗ್ರಾಮದ ನಿವಾಸಿಯಾಗಿರುವ ಹರ್ಷ್ ರಾಜ್ ಪ್ರತಿಭಾವಂತ ವಿದ್ಯಾರ್ಥಿಯಾಗಿರುವುದರ ಜತೆ ರಾಜಕೀಯದಲ್ಲೂ ಸಕ್ರಿಯನಾಗಿದ್ದ. ಲೋಕನಾಯಕ ಯುವ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರೂ ಆಗಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

ಹರ್ಷರಾಜ್ ಅವರ ಅಮಾನುಷ ಹತ್ಯೆಗೆ ವಿದ್ಯಾರ್ಥಿಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಗಲಭೆ ಭೀತಿಯಿಂದ ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಿದ್ದಾರೆ.

ಕೊಲೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ನಗರ ಎಸ್ಪಿ (ಪೂರ್ವ) ಭರತ್ ಸೋನಿ ಹೇಳಿದ್ದಾರೆ.

Ad
Ad
Nk Channel Final 21 09 2023
Ad