ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದ ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿ ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಓರ್ವನಿಗೆ ತೀವ್ರ ಪೆಟ್ಟಾಗಿರುವ ಘಟನೆ ಗುರುವಾರ ಬೆಳ್ಳಿಗ್ಗೆ 10 ಘಂಟೆ ವೇಳೆ ಜರುಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಆರ್ ಎಸ್ ದೊಡ್ಡಿಯ ಗುಜರಿ ಗೋವಿಂದ (65) ಎಂಬಾತನೆ ಪೆಟ್ಟಿಗೊಳಗಾದ ವ್ಯಕ್ತಿಯಾಗಿದ್ದಾನೆ ಹನೂರು ಪಟ್ಟಣದ ಹೊರವಲಯದ ಕೊಳ್ಳೇಗಾಲ ಮುಖ್ಯರಸ್ತೆಯಲ್ಲಿ ಮಹದೇಶ್ವರ ಬೆಟ್ಟ ರಸ್ತೆ ಮುಖೆನಾ ಆಗಮಿಸಿದ ಅಪರಿಚಿತ ವಾಹನ ಹಾಗೂ ಆರ್ ಎಸ್ ದೊಡ್ಡಿಯಿಂದ ತೆರಳುತ್ತಿದ್ದ ಬೈಕ್ ನಡುವೆ ಈ ಅವಘಡ ಸಂಭವಿಸಿದ್ದು ಸ್ಥಳೀಯರು ಹಾಗು ಪೊಲೀಸರ ನೆರವಿನಿಂದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನೆ ಮಾಡಲಾಗಿದೆ

