ಉಜಿರೆ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಿಕ್ಕಿದಂತಹ ಅವಕಾಶಗಳನ್ನು ಬಳಸಿಕೊಂಡರೆ ತಮ್ಮಲ್ಲಿ ಹೊಸ ಬಗೆಯ ಆತ್ಮವಿಶ್ವಾಸ ಬೆಳೆಸಲು ಸಾಧ್ಯ. ಕೇವಲ ಹಿಂದಿ ಮಾತ್ರವಲ್ಲದೆ ಎಲ್ಲಾ ಭಾಷೆಗಳನ್ನು ನಾವು ಗೌರವಿಸಬೇಕು ಎಂದು ಹಿಂದಿ ದಿನದ ಅಂಗವಾಗಿ ಏರ್ಪಡಿಸಿದಂತಹ ಕಾರ್ಯಕ್ರಮದಲ್ಲಿ ಶ್ರೀ ಧ.ಮಂ.ವಸತಿ ಪ.ಪೂ ಕಾಲೇಜಿನ ಹಿಂದಿ ಉಪನ್ಯಾಸಕರಾದ ಸುನಿಲ್ ಪಂಡಿತ್ ಇವರು ತಮ್ಮ ಅತ್ಯುತ್ತಮ ಮಾತುಗಳಿಂದ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ವಿದ್ಯಾರ್ಥಿಗಳು ಹಿಂದಿ ಭಾಷೆಯ ಅಂಗವಾಗಿ ಭಾಷಣ, ಸಮೂಹ ಗಾಯನ ನೃತ್ಯ ಪ್ರದರ್ಶನ, ಕವಿತೆ, ಹಿಂದಿ ಶಾಯರಿಯ ಮೂಲಕ ವಿದ್ಯಾರ್ಥಿಗಳನ್ನು ಮನೋರಂಜನೆಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎನ್.ದಿನೇಶ್ ಚೌಟ ವಹಿಸಿದ್ದರು. ಹಿಂದಿ ವಿಭಾಗದ ಉಪನ್ಯಾಸಕಿ ಡಾ. ಫ್ಲೆವೀಯಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಫಹಾಜ್ ಕಾರ್ಯಕ್ರಮ ನಿರೂಪಿಸಿದರು.